Latest

ಸುಳಗಾ ಬಳಿ ವ್ಯಕ್ತಿಯ ಕೊಲೆ

   
     ಪ್ರಗತಿವಾಹಿನಿ ಸುದ್ದಿ, ಅಗಸಗಿ
ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ಹೊಟೇಲ್ ಅಂಬಿಕಾ ಹತ್ತಿರ ಕೆಂಬಾವಿ ನಾಲಾ ಬ್ರಿಜ್ ಕೆಳಗೆ ಸೋಮವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಕತ್ತು ಹಿಸುಕಿ ಕೊಲೆಗೈಯಲಾಗಿದೆ.
ಕೊಲೆಯಾದ ವ್ಯಕ್ತಿ ಸುಳಗಾ ಗ್ರಾಮದ ಅಂಬೇಡ್ಕರ್‌ ಗಲ್ಲಿಯ ನಿವಾಸಿ ವೈಜು ವೆಂಕಪ್ಪ ಕಾಂಬಳೆ (62). ವೈಜು ಎರಡು ವರ್ಷದ ಹಿಂದೆ ಸರ್ಕಾರಿ  ಸೇವೆಯಿಂದ ನಿವೃತ್ತಿಯಾಗಿ ಸಧ್ಯ ಊರಿನ ಕೋಲಕಾರನಾಗಿ ಕೆಲಸ ಮಾಡುತ್ತಿದ್ದ.
ಸ್ಥಳಕ್ಕೆ ಬೆಳಗಾವಿ ಪೊಲೀಸ್ ಉಪಾಯುಕ್ತ ಮಹಾನಿಂಗ  ನಂದಗಾವಿ , ಕಾಕತಿ ಸಿಪಿಐ ಶ್ರೀಶೈಲ ಕೌಜಲಗಿ, ಪಿಎಸ್ ಐ ಹಂಚಿನಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಒಯ್ಯಲಾಗಿದೆ.

Related Articles

Back to top button