ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ರಥ ಸಪ್ತಮಿ ನಿಮಿತ್ಯ ಹುಕ್ಕೇರಿ ಹಿರೇಮಠದಲ್ಲಿ ಸೂರ್ಯ ದೇವನನ್ನು ಪೂಜಿಸಿ ನಗರದ ಮಹಿಳೆಯರಿಗೆ ನವಗ್ರಹ ಧಾನ್ಯ ಉಡಿ ತುಂಬುವ ಮೂಲಕ ಶ್ರೀ ಗುರುಶಾಂತೇಶ್ವರಿಗೆ ಹಾಗೂ ಸೂರ್ಯ ದೇವನಿಗೆ ಮಹಾಮಂಗಳಾರತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಹುಕ್ಕೇರಿಯ ನೂತನ ತಹಶಿಲ್ದಾರ ರೇಷ್ಮಾ ತಾಳಿಕೋಟೆ, ಪಿಎಸ್ಐ ಶಿವಾನಂದ ಗುಡಗನಟ್ಟಿ ಅವರನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸತ್ಕರಿಸಿದರು.