ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಲೋಕೋಪಯೋಗಿ ಇಲಾಖೆಯಿಂದ ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟು ೪೦.೫೦ ಕೋಟಿ ರೂ.ಗಳು ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಎಲ್ಲ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗಿದೆ.
ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎಸ್ಎಚ್ಡಿಪಿ)ಅಡಿಯಲ್ಲಿ ಜಾಂಬೋಟಿ-ರಬಕವಿ(ಎಸ್ಎಚ್-೫೪) ರಸ್ತೆ ಕಿ.ಮೀ. ೯೬.೬೦ ದಿಂದ ೧೦೬.೭೫ ರವರೆಗೆ ಅರಭಾವಿ ಕ್ಷೇತ್ರದ ಬೆಟಗೇರಿ-ಗೋಸಬಾಳ-ಕೌಜಲಗಿವರೆಗಿನ ೧೦.೧೫ ಕಿ.ಮೀ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯಲಿದೆ.
ಮೂಡಲಗಿ-ಸುಣಧೋಳಿ(ಎಂಡಿಆರ್) ರಸ್ತೆ ಕಿ.ಮೀ. ೦.೦೦ ದಿಂದ ೭.೯೦ ರ ವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಯರಗಟ್ಟಿ-ಬಬಲೇಶ್ವರ ರಸ್ತೆ ಕಾಮಗಾರಿಯಲ್ಲಿ ಯಾದವಾಡದಿಂದ ತಾಲೂಕಾ ಹದ್ದಿವರೆಗೆ ಕಿ.ಮೀ. ೩೩.೬೫ ದಿಂದ ೩೪.೯೫ ಹಾಗೂ ೩೯.೫೧ ದಿಂದ ೪೨.೪೧ ವರೆಗೆ ಒಟ್ಟು ೪.೨೦ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಒಟ್ಟು ೨೩.೫೦ ಕೋಟಿ ರೂ.ಗಳ ಅನುದಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ.
೨೦೧೮-೧೯ನೇ ಸಾಲಿನ ಲೆಕ್ಕಶೀರ್ಷಿಕೆ ೫೦೫೪ ರ ಅಫೆಂಡಿಕ್ಸ್ ಇ ಯೋಜನೆಯಡಿ ೪.೯೫ ಕೋಟಿ ರೂ. ವೆಚ್ಚದಲ್ಲಿ ಬದಾಮಿ-ಗೊಡಚಿ-ಗೋಕಾಕ ಫಾಲ್ಸ್(ರಾ.ಹೆ-೧೩೪) ರಸ್ತೆ ಕಿ.ಮೀ ೯೪.೦೦ ರಿಂದ ೯೬.೪೦ ಹಾಗೂ ೯೯.೦೦ ರಿಂದ ೧೦೦.೦೦ ಕಿ.ಮೀ ವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ೩ ಕೋಟಿ ರೂ. ವೆಚ್ಚದಲ್ಲಿ ಜಾಂಬೋಟಿ-ರಬಕವಿ(ರಾ.ಹೆ-೫೪) ರಸ್ತೆ ಕಿ.ಮೀ ೧೧೭.೩೦ ರಿಂದ ೧೨೩.೨೮ ರವರೆಗೆ ರಸ್ತೆ ಅಗಲೀಕರಣ ಮತ್ತು ಸುಧಾರಣೆ ಮಾಡುವುದು.
೪.೮೦ ಕೋಟಿ ರೂ. ವೆಚ್ಚದಲ್ಲಿ ತಿಗಡಿ-ಸುಣಧೋಳಿ-ಭೈರನಟ್ಟಿ(ಜಿಮುರ) ರಸ್ತೆ ಕಿ.ಮೀ ೦.೦೦ ರಿಂದ ೬.೦೦ ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ೧.೨೫ ಕೋಟಿ ರೂ. ವೆಚ್ಚದ ಮಲ್ಲಾಪೂರ ಪಿಜಿ-ತುಕ್ಕಾನಟ್ಟಿ-ನಾಗನೂರ(ಜಿಮುರ) ರಸ್ತೆ ಕಿ.ಮೀ ೧೪.೨೩ ರಿಂದ ೧೫.೦೦ ರವರೆಗೆ ಹಾಗೂ ೧೯.೯೦ ರಿಂದ ೨೦.೩೦ ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ೩ ಕೋಟಿ ರೂ. ವೆಚ್ಚದಲ್ಲಿ ಗೋಸಬಾಳ-ಬಿಲಕುಂದಿ-ಭೈರನಟ್ಟಿ(ಜಿಲ್ಲಾ ಮುಖ್ಯ ರಸ್ತೆ) ರಸ್ತೆ ಕಿ.ಮೀ ೧೧.೪೦ ರಿಂದ ೧೫.೪೦ ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ಈ ಎಲ್ಲ ೪೦.೫೦ ಕೋಟಿ ರೂ. ವೆಚ್ಚದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.