Latest

ಐಟಿ ಕೋ-ಆರ್ಡಿನೇಟರ್ ಕೋರ್ಸ್ ಸಮಾರೋಪ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಸ್ಥಳೀಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಕೌಶಲಾಭಿವೃದ್ಧಿ ಯೋಜನೆಯ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಮ್ಮಿಕೊಳ್ಳಲಾಗಿದ್ದ ಐಟಿ ಕೋ-ಆರ್ಡಿನೇಟರ್ ಇನ್ ಸ್ಕೂಲ್ ತರಬೇತಿ ಕೋರ್ಸ್‌ನ ಸಮಾರೋಪ ಸಮಾರಂಭ ಜರುಗಿತು.
ಮುಖ್ಯ ಅತಿಥಿ, ಕೋರ್ಸ್ ಪರಿವೀಕ್ಷಕ ತೆಲಂಗಾಣದ ಪಿ. ಅರುಣ ಪಾಂಡೆ ಮಾತನಾಡಿ, ಈ ಕೋರ್ಸ್‌ನ ಸರ್ಟಿಫಿಕೇಟ್ ಹೊಂದಿದವರಿಗೆ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಸಾಕಷ್ಟು ಬೇಡಿಕೆ ಇದೆ. ತರಬೇತಿಯಲ್ಲಿ ಕಲಿತ ಜ್ಞಾನವನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗ ಮುಖ್ಯಸ್ಥ ಪ್ರೊ. ವಿ.ಕೆ. ಪಾಟೀಲ ಮಾತನಾಡಿ, ಮೂರನೇ ಬಾರಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ ಈ ತರಬೇತಿಯ ಸದುಪಯೋಗಪಡಿಸಿಕೊಳ್ಳಿ. ತರಬೇತಿಯಲ್ಲಿ ಪಡೆದ ಜ್ಞಾನದಿಂದ ಜೀವನ ರೂಪಿಸಿಕೊಳ್ಳಿ ಎಂದು ಹೇಳಿದರು.
ಸಂಯೋಜಕ ಪ್ರೊ. ಮನೋಜ ನಾಂದಣಿ ಸ್ವಾಗತಿಸಿದರು. ಪ್ರೊ. ವೀರಣ್ಣಾ ಮೋದಿ ವಂದಿಸಿದರು. ೧೬ ಯುವಕರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

Related Articles

Back to top button