ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಶಹಾಪುರದ ಕೆಎಲ್ಇ ಆಯುರ್ವೇದ ಆಸ್ಪತ್ರೆಯಲ್ಲಿ ಮಾ.೭ ರಂದು ಕ್ಯಾನ್ಸರ್ನಿಂದ ಬಳಲುವ ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ರೋಗಿಗಳು ತಮ್ಮ ರಕ್ತ, ಸ್ಕ್ಯಾನ್, ಸೂಜಿ ತಪಾಸಣೆ ವಿವರಗಳನ್ನು ಜೊತೆಗೆ ತರಬೇಕು. ಈ ಶಿಬಿರದಲ್ಲಿ ಪುಣೆಯ ರಸಾಯು ಕ್ಯಾನ್ಸರ್ ಕ್ಲಿನಿಕ್ ವೈದ್ಯರು ಸಲಹೆ ನೀಡಲಿದ್ದಾರೆ. ಹಾಗೆಯೇ ಮಾ.೮ ರಂದು ಬೆಳಗ್ಗೆ ೮ ರಿಂದ ಮಧ್ಯಾಹ್ನ ೧ ರವರೆಗೆ ಉಚಿತ ಕಿಡ್ನಿ ತಪಾಸಣಾ ಶಿಬಿರ ನಡೆಯಲಿದ್ದು, ಕೊಲ್ಹಾಪುರದ ಆಯುರ್ವೇದ ವೈದ್ಯ ಡಾ. ಸುನೀಲ ಇನಾಮದಾರ ಸಲಹೆ ನೀಡಲಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.