Latest

7ನೇ ವೇತನ ಆಯೋಗ :ಭತ್ಯೆ, ಸೌಲಭ್ಯ ಪರಿಷ್ಕರಣೆಗೆ ಶೀಘ್ರ ವರದಿ ಸಲ್ಲಿಸಲು ಒತ್ತಾಯ

ಪ್ರಗತಿವಾಹಿನಿ, ಬೆಂಗಳೂರು: ರಾಜ್ಯ ಸರಕಾರಿ ನೌಕರರ ವೇತನ, ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಆದಷ್ಟೂ ಬೇಗನೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ನೌಕರರ ಸಂಘ ವೇತನ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.

ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ನಿಯೋಗ 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ ರಾವ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದೆ.

Home add -Advt

ಈ ಹಿಂದಿನ 6ನೇ ವೇತನ ಆಯೋಗದ ಅವಧಿ ಮಾ.31ಕ್ಕೆ ಕೊನೆಗೊಳ್ಳಲಿದೆ. ಶೀಘ್ರವೇ ಚುನಾವಣೆ ನೀತಿ ಸಂಹಿತೆ ಕೂಡ ಜಾರಿಯಾಗುವ ಸಾಧ್ಯಯೆ ಇದೆ. ಹೀಗಾಗಿ ಸಕಾಲಿಕವಾಗಿ ಸರಕಾರಿ ನೌಕರರ ವೇತನ ಪರಿಷ್ಕರಣೆಯಾಗುವಂತೆ ಕ್ರಮ ವಹಿಸಿ ಆಯೋಗದ ವರದಿಯನ್ನು ಶೀಘ್ರ ಸಲ್ಲಿಸಬೇಕು.

ಸಾಮಾನ್ಯವಾಗಿ ಆಯೋಗಗಳು ಎರಡು ಹಂತಗಳಲ್ಲಿ ವರದಿ ನೀಡುತ್ತವೆ. ಆದ್ದರಿಂದ ಮೊದಲ ಹಂತದ ವರದಿಯನ್ನು ಆದಷ್ಟೂ ಮಾರ್ಚ್ ಒಳಗೆ ಸಲ್ಲಿಸಬೇಕು ಎಂದು ಸಂಘ ಮನವಿಯಲ್ಲಿ ಕೋರಿದೆ.

*ಭಾರಿ ಚಳಿ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ*

https://pragati.taskdun.com/karnataka-weathercold-waveone-week/

*ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ PSI ಪ್ರಕರಣದ ಆರೋಪಿ ರುದ್ರೇಗೌಡ ಪಾಟೀಲ್*

https://pragati.taskdun.com/545-psi-scamaccused-rudregowda-patilelectioncontesannounce/

ಕ್ರೆಡೈ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿಗೆ ಮಾತೃವಿಯೋಗ

https://pragati.taskdun.com/geeta-kulkarni-passes-away/

Related Articles

Back to top button