Belagavi NewsBelgaum NewsKannada NewsKarnataka News
*ಮೀನುಗಾರರಿಗೆ ವಿಶೇಷ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಜಲಾಶಯ, ನದಿ ಭಾಗಗಳಲ್ಲಿ ಹಾಗೂ ಕೆರೆಗಳಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ.
ಮಳೆಯ ಪ್ರವಾಹದಿಂದಾಗಿ ಮೀನುಗಾರಿಕೆಯ ಸಲಕರಣೆಗಳಾದ ಹರಿಗೋಲು (ತೆಪ್ಪ) ಹಾಗೂ ಇನ್ನಿತರೆ ಸಾಮಗ್ರಿಗಳಿಂದ ಮೀನು ಹಿಡಿಯುವುದನ್ನು ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ ಎಂದು ಮೀನುಗಾರಿಕೆ ಉಪ ನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



