Latest

ನಾಳೆ ಪೇಜಾವರ ಶ್ರೀಗಳಿಂದ ಹರಿದಾಸ ಹಬ್ಬ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಹರಿದಾಸ ಸೇವಾ ಸಮಿತಿ ವತಿಯಿಂದ ಏ.೧೨ ರಿಂದ ೧೪ ರವರೆಗೆ ಮೂರು ದಿನಗಳ ಕಾಲ ಹರಿದಾಸ ಹಬ್ಬ ಆಯೋಜಿಸಲಾಗಿದೆ. ಹಬ್ಬದ ಅಂಗವಾಗಿ ಏ.೧೨ ರಂದು ಶುಕ್ರವಾರ ನಡೆಯುವ ಕಾರ್‍ಯಕ್ರಮಗಳು ಹೀಗಿವೆ:
ಸಂಜೆ ೫.೩೦ ಕ್ಕೆ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದಂಗಳವರು ಕಾರ್‍ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಪಂ. ಗುರುರಾಜಾಚಾರ್ಯ ಜೋಶಿ, ಮಧ್ವಾಚಾರ್ಯ ಆಯಿ, ಹಣಮಂತ ಕೊಟಬಾಗಿ, ವಿಷ್ಣುತೀರ್ಥ ಗುಬ್ಬಿ ಆಗಮಿಸಲಿದ್ದಾರೆ.
ಬ್ರಾಹ್ಮಣ ಸಮಾಜದ ಮುಖಂಡ ಅನಿಲ ಪೋತದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷ ರಾಯಚೂರು ಶೇಷಗಿರಿದಾಸ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಗೆ ಅನಂತಾದ್ರೀಶ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಉದ್ಘಾಟನೆ ಪೂರ್ವ ಮಧ್ಯಾಹ್ನ ಚಿದಂಬರ ನಗರದ ಲಕ್ಷ್ಮೀ ಶೋಭಾನ ಭಜನಾ ಮಂಡಳ, ಟಿಳಕವಾಡಿಯ ಮಧ್ವಮಾಧವ ಭಜನಾ ಮಂಡಳ, ವೇಣುಗೋಪಾಲ ಭಜನಾ ಮಂಡಳ, ಕಾಕತಿಯ ರಾಘವೇಂದ್ರ ಭಜನಾ ಮಂಡಳದವರಿಂದ ಭಜನೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್‍ಯಕ್ರಮಗಳು ಹಾಗೂ  ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಇವರಿಂದ ಉಪನ್ಯಾಸ, ಶ್ರೀಪಾದಂಗಳವರಿಂದ ಅಮೃತೋಪದೇಶ ಹಾಗೂ ಮೈಸೂರು ರಾಮಚಂದ್ರಾಚಾರ್ಯ ಇವರಿಂದ ದಾಸವಾಣಿ ಕಾರ್‍ಯಕ್ರಮಗಳು ನಡೆಯಲಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button