Karnataka News

*ಕೊಲೆ ಆರೋಪಿ ದರ್ಶನ್ ಗೆ ಜಾಮೀನು ಮಂಜೂರು: ಮೃತ ರೇಣುಕಾಸ್ವಾಮಿ ತಂದೆ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ವಿಚಾರವಾಗಿ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ ನೀಡಿದ್ದು, ನಮಗೆ ಅನ್ಯಯಾವಾಗಿದೆ ಎಂದಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಿನಾಥಯ್ಯ, ದರ್ಶನ್ ಗೆ ಜಾಮೀನು ಸಿಕ್ಕಿದ್ದು ಕಾನೂನು ವ್ಯವಸ್ಥೆಯ ಕ್ರಮ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆರೋಪಿ ದರ್ಶನ್ ಗೆ ಚಿಕಿತ್ಸೆ ವಿಚಾರವಾಗಿ ಜಾಮೀನು ಸಿಕ್ಕಿದೆ ಎಂಬ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಈ ವಿಚಾರದಲ್ಲಿ ಕಾನೂನು ಇದೆ, ವೈದ್ಯರಿದ್ದಾರೆ. ನಾವೇನು ಹೇಳಲ್ಲ. ಆದರೆ ನ್ಯಾಯಕ್ಕಾಗಿ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.

ನಮಗೆ ಅನ್ಯಾಯವಾಗಿದೆ. ದರ್ಶನ್ ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಬೇಡಿಕೆ. ಈ ನಿಟ್ಟಿನಲ್ಲಿ ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ನಮಗೆ ಮೊಮ್ಮಗು ಬಂದಿದೆ. ಮೊಮ್ಮಗನನ್ನು, ಸೊಸೆಯನ್ನು ನೋಡಿಕೊಂಡು ಬರಬೇಕೆಂದು ಹೋಗುತ್ತಿದ್ದೇವೆ. ಮಗನನ್ನು ಕಳೆದುಕೊಂಡು ಸಂಕಷ್ಟ, ನೋವಿನಲ್ಲಿದಲ್ಲಿವೆ. ನಮಗೆ ನ್ಯಾಯ ಸಿಗಬೇಕು. ತಪ್ಪು ಮಾಡಿರುವ ದರ್ಶನ್ ಗೆ ಶಿಕ್ಷೆ ಆಗಬೇಕು ಎಂದಿದ್ದಾರೆ.


Home add -Advt

Related Articles

Back to top button