Latest

ರೈತನ ಮಿತ್ರ ಯಾರು? -ಪ್ರಶ್ನೆ, ಆಯ್ಕೆ ನೋಡಿ ಮಕ್ಕಳೇ ಕಂಗಾಲು!

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ರೈತನ ಮಿತ್ರ ಯಾರು?

ಅ) ಕುಮಾರಸ್ವಾಮಿ ಆ) ಎರೆಹುಳು ಇ) ಯಡಿಯೂರಪ್ಪ

Home add -Advt

ಏನಿದು, ಅರ್ಥವಾಗಲಿಲ್ಲವಾ?

ಬೆಂಗಳೂರಿನ ಖಾಸಗಿ ಪ್ರೌಢಶಾಲೆಯ 8ನೇ ತರಗತಿಯ ಮಕ್ಕಳಿಗೆ ಕೇಳಲಾದ ಪ್ರಶ್ನೆ ಮತ್ತು ಉತ್ತರಕ್ಕೆ ನೀಡಲಾದ ಆಯ್ಕೆ ಇದು.

ಈ ಪ್ರಶ್ನೆ ಪತ್ರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಶ್ನೆ ನೋಡಿ ಮಕ್ಕಳೇ ಕಕ್ಕಾಬಿಕ್ಕಿ. ರೈತನ ಮಿತ್ರ ಎರೆಹುಳು ಎಂದು ಬರೆಯುವುದೋ… ತಮ್ಮನ್ನು ತಾವು ರೈತನ ಮಿತ್ರರೆಂದು ಕ್ಲೇಮ್ ಮಾಡಿಕೊಳ್ಳುವ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ  ಹೆಸರು ಬರೆಯುವುದೋ…. ಯಾವ ಆಯ್ಕೆ ಬರೆಯಬೇಕೆನ್ನುವ ಗೊಂದಲಕ್ಕೆ ಮಕ್ಕಳು ಬಿದ್ದರು.

ಇದರಲ್ಲಿರುವ ಇನ್ನೊಂದು ಪ್ರಶ್ನೆ ಹೀಗಿದೆ -ಮೂಗಿನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿರುವುದು ಯಾವುದು?

ಅ) ಕರ್ಚೀಪು ಬಿ) ಟವೆಲ್ ಸಿ) ಅನಾಸಿನ್

ಸಾಮಾಜಿಕ ಜಾಲತಾಣಗಳಲ್ಲಿ ಈಗ ಪ್ರಶ್ನೆ ಪತ್ರಿಕೆ ಹರಿದಾಡುತ್ತಿದೆ.

 

Related Articles

Back to top button