Kannada NewsKarnataka NewsLatest

*ಏಕಾಏಕಿ ನೆಲಕ್ಕುರುಳಿದ 120 ಅಡಿ ಎತ್ತರದ ತೇರು*

ಪ್ರಗತಿವಾಹಿನಿ ಸುದ್ದಿ: 120 ಅಡಿ ಎತ್ತರದ ತೇರು ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವ ಘಟನೆ ಬೆಂಗಳೂರಿನ ಆನೇಕಲ್ ಬಳಿಯ ಕಮ್ಮಸಂದ್ರದಲ್ಲಿ ಸಂಭವಿಸಿದೆ.

ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಪಾಲ್ಗೊಳ್ಳಲು ಈ ತೇರು ತೆರಳುತ್ತಿತ್ತು. ಹಿಲಲಿಗೆ ಗ್ರಾಮದಿಂದ 120 ಅಡಿ ಎತ್ತರದ ತೇರನ್ನು ಎತ್ತುಗಳು, ಟ್ರ್ಯಾಕ್ಟರ್ ಮೂಲಕವಾಗಿ ಎಳೆದು ತೇರಲಾಗುತ್ತಿತ್ತು.

ಈ ವೇಳೆ ಆನೆಕಲ್ ಬಳಿಯ ಕಮ್ಮಸಂದ್ರದ ಹೈಪರ್ ಮಾರ್ಕೆಟ್ ಬಳಿ ನಿಯಂತ್ರಣ ತಪ್ಪಿ ಏಕಾಏಕಿ ತೇರಿ ನೆಲಕ್ಕುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಐತಿಹಾಸಿಕ ತೇರು ನೆಲಕ್ಕುರುಳಿ ಬಿದ್ದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Related Articles

Back to top button