Kannada NewsKarnataka NewsLatest

*ಮೋದಿ ಮತ್ತೆ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ರಕ್ತ ಅರ್ಪಿಸಿದ; ಅಭಿಮಾನದ ಹುಚ್ಚು ಪರಾಕಾಷ್ಠೆ ಮೆರೆದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೋರ್ವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥಿಸಿ ತನ್ನ ಕೈ ಬೆರಳನ್ನೇ ಕತ್ತರಿಸಿ ರಕ್ತ ಅರ್ಪಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.

ಅರುಣ್ ವರ್ಣೇಕರ್ ಎಂಬಾತ ತನ್ನ ಎಡಗೈ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತ ಅರ್ಪಿಸಿದ್ದು, ಸಾಮಾಜಿಕ ಜಾಲತಾನಗಳಲ್ಲಿ ಈ ಭೀಕರ ದೃಶ್ಯ ವೈರಲ್ ಆಗಿದೆ. ಕಲ್ಲಿನ ಮೇಲೆ ಎಡಗೈ ಬೆರಳಿಟ್ಟು ಬಲಗೈಯಿಂದ ಕತ್ತಿ ಹಿಡಿದು ಬೆರಳು ಕತ್ತರಿಸಿಕೊಂಡಿರುವ ಭೀಕರ ದೃಶ್ಯ ಬೆಚ್ಚಿಬೀಳುವಂತಿದೆ.

ಪ್ರಧಾನಿ ನರೇಂದ್ರ ಮೋದಿ ಕಟ್ಟಾ ಅಭಿಮಾನಿಯಾಗಿರುವ ಈತ ಮೋದಿಗಾಗಿ ಗುಡಿಯೊಂದನ್ನು ಕಟ್ಟಿ ಪೂಜೆ ಮಾಡುತ್ತಿದ್ದಾನೆ. ತನ್ನ ಕೈ ಬೆರಳು ಕತ್ತರಿಸಿಕೊಂಡು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿ ಗೋಡೆ ಮೇಲೆ ಬರೆದಿದ್ದಾನೆ.

ಬೆರಳನ್ನು ಕತ್ತರಿಸಿದ ಬಳಿಕ ಕೈಯಿಂದ ಸುರಿಯುತ್ತಿದ್ದ ರಕ್ತದಲ್ಲಿ ಮಾ ಕಾಳಿಮಾತಾ ಮೋದಿ ಬಾಬಾಕೋ ರಕ್ಷಾ ಕರೋ ಎಂದು ಬರೆದಿದ್ದಾನೆ. ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನಿಯಾದಗ ಕೂಡ ಅರುಣ್ ವರ್ಣೇಕರ್ ರಕ್ತದಲ್ಲಿ ಕಾಳಿಮಾತೆಗೆ ಹರಕೆ ಇಟ್ಟಿದ್ದರಂತೆ. ಈ ಹಿಂದೆಯೂ ಬೆರಳು ಕುಯ್ದುಕೊಂಡು ಮೋದಿ ಗೆಲುವಿಗಾಗಿ ಪ್ರಾರ್ಥಿಸಿದ್ದರಂತೆ. ಇದು ಕೊನೇ ಚುನಾವಣೆಯಾಗಿರುವುದರಿಂದ ಈ ಬಾರಿ ಬೆರಳನ್ನೇ ಕತ್ತರಿಸಿ ಅರ್ಪಿಸಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆದು ಪ್ರಾರ್ಥಿನಿಸಿದ್ದಾರೆ. ಅಭಿಮಾನವಿರಬೇಕು ಆದರೆ ಇಂತಹ ಹುಚ್ಚು ಅಭಿಮಾನ ಕಂಡು ಜನರೇ ಆತಂಕಗೊಂಡಿದ್ದಾರೆ.


Related Articles

Back to top button