Latest

14ನೇ ವರ್ಷದ ಭಗವದ್ಗೀತಾ ಅಭಿಯಾನ ನ.4ರಿಂದ ಆರಂಭ: ಸ್ವರ್ಣವಲ್ಲೀ ಶ್ರೀ

ಪ್ರಗತಿವಾಹಿನಿ ಸುದ್ದಿ;ಶಿರಸಿ: ಹದಿನಾಲ್ಕನೇ ವರ್ಷದ ಭಗವದ್ಗೀತಾ ಅಭಿಯಾನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನ.4ರಿಂದ ಆರಂಭಿಸಲಾಗುತ್ತಿದೆ. ಡಿಸೆಂಬರ್ 4ರಂದು ದಾವಣಗೆರೆಯಲ್ಲಿ ‌ಮಹಾ ಸಮರ್ಪಣೆ ನಡೆಯಲಿದೆ ಎಂದು ಭಗವದ್ಗೀತಾ ಅಭಿಯಾನದ ಮುಖ್ಯಸ್ಥರು, ಸ್ವರ್ಣವಲ್ಲೀ ‌ಮಹಾ‌ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ‌ಸ್ವಾಮೀಜಿ ಪ್ರಕಟಿಸಿದರು.

ಸ್ವರ್ಣವಲ್ಲೀಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಗೀತಾ ಅಭಿಯಾನಕ್ಕೆ ಈ ಬಾರಿ ಐದನೇ ಅಧ್ಯಾಯ ಆಯ್ಕೆ ಮಾಡಿಕೊಳ್ಳಲಾಗಿದೆ. 2007ರಿಂದ ಆರಂಭಗೊಂಡ ಈ ಅಭಿಯಾನ ಸಮಾಜದಲ್ಲಿ ಗೀತೆಯ‌ ಮೂಲಕ ಸುಖ ಶಾಂತಿ ನೆಲೆಸುವಂತೆ, ಪ್ರತಿ ವ್ಯಕ್ತಿ ಸುಸಂಸ್ಕೃತರಾಗಲು ಪ್ರೇರೆಪಿಸಲು ಇದು ನಿರಂತರವಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷ ಕರೋನಾ ಕಾರಣದಿಂದ ಸಾರ್ವಜನಿಕವಾಗಿ ನಡೆಸಲು ಸಾಧ್ಯ ಆಗಿರಲಿಲ್ಲ. ಈ ವರ್ಷ ಸಾರ್ವಜನಿಕರ, ಸರಕಾರದ, ಸಂಸ್ಥೆಗಳ ಸಹಕಾರದಲ್ಲಿ‌ ಮುನ್ನಡೆಸಲಾಗುತ್ತದೆ ಎಂದರು.

ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ತಪ್ಪದೇ ಗೀತಾಭಿಯಾನ ನಡೆದಿದೆ. ಇದೇ ರೀತಿ ಅನೇಕ ಜೈಲಿನಲ್ಲಿ ಕೈದಿಗಳ ಮೂಲಕ ಅಭಿಯಾನ ನಡೆಸಲಾಗಿದೆ. ಈ ಬಾರಿ ರಾಜ್ಯದ ಎಲ್ಲ ಜೈಲಿನಲ್ಲೂ ನಡೆಸಲು ಯೋಜಿಸಿದ್ದೇವೆ ಎಂದ ಅವರು, ಮೂರು ಹಂತದಲ್ಲಿ ರಾಜ್ಯದಲ್ಲಿ ಗೀತಾ ಅಭಿಯಾನ ನಡೆಯಲಿದೆ ಎಂದರು.

ಅಭಿಯಾನದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಗೀತೆ ಕುರಿತ ವಿವಿಧ ಸ್ಪರ್ಧೆ ರಾಜ್ಯ ಮಟ್ಟದ ತನಕ‌ ನಡೆಯಲಿದೆ. ಸಾರ್ವಜಮಿಕವಾಗಿ ಮೂರು ಹಂತದ ಅಭಿಯಾನಕ್ಕೆ ನ.4ರಿಂದ10, 12ರಿಂದ 18, 20ರಿಂದ ನ.26ರ ತನಕ ನಡೆಸಬೇಕು. ಒಟ್ಟೂ ಎಂಟು ದಿನಗಳ ಅಭ್ಯಾಸ ಇಲ್ಲಾಗಬೇಕು ಎಂದ ಶ್ರೀಗಳು, ನ.28 ತಾಲೂಕು ಮಟ್ಟದ, ನ.30 ಜಿಲ್ಲಾ‌ ಮಟ್ಟದ, ಡಿ.4 ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿದೆ ಎಂದರು.

ನ.27ರಿಂದ ಏಳು ದಿನಗಳ ಕಾಲ ಪ್ರತಿ‌ ಮನೆಯಲ್ಲಿ ೫ನೇ ಅಧ್ಯಾಯ ಪಠಿಸಬೇಕು. ಡಿ.3ರಂದು ಹದಿನೆಂಟೂ ಅಧ್ಯಾಯ ಪಠಣ ಮಾಡಿ ಗೀತಾ ಜಯಂತಿ ಆಚರಿಸಬೇಕು ಎಂದೂ ಆಶಿಸಿದರು.

ಈಗಾಗಲೇ ರಾಜ್ಯ‌ಮಟ್ಟದ ಅಭಿಯಾನ ಸಮಿತಿ ರಚನೆ ಮಾಡಲಾಗಿದೆ. ಪ್ರತಿ‌ ಜಿಲ್ಲೆಯಲ್ಲೂ ಜಿಲ್ಲಾ ಪ್ರಮುಖರನ್ನೂ ನಿಯೋಜಿಸಲಾಗಿದೆ ಎಂದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ‌.ಎನ್.ಹೆಗಡೆ ಮಾಹಿತಿ ನೀಡಿ ಅಭಿಯಾನ ಕುರಿತು ಮಾಹಿತಿ, ಸಂಪರ್ಕಕ್ಕೆ ವೆಂಕಟ್ರಮಣ ಹೆಗಡೆ 8277383500 ಅಥವಾ 08384279359ಗೆ ಮುಂಜಾನೆ 11 ರಿಂದ‌ 1 ಅಥವಾ ಸಂಜೆ 4ರಿಂದ 6ರ ತನಕ ಸಂಪರ್ಕ ಮಾಡಬಹುದಾಗಿದೆ ಎಂದರು.

ಮನುಷ್ಯ ಅನೇಕ ವಿಕಾರಗಳಿಗೆ ಬಲಿ ಆಗುತ್ತಿದ್ದಾನೆ. ವಿಕೃತ ‌ಮನಸ್ಸು ಅಡ್ಡದಾರಿ ಹಿಡಿಯುತ್ತಿದೆ. ಅಪಕ್ವ, ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ. ಆದ್ಯಾತ್ಮ ವಿದ್ಯೆಯ ಆಕರ ಗ್ರಂಥವೇ ಭಗವದ್ಗೀತೆ ಎಂದು ಸ್ವರ್ಣವಲ್ಲಿ ಶ್ರೀಗಳು ಹೇಳಿದ್ದಾರೆ.

ಈ ವೇಳೆ ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವಕರ್ ಇತರರು ಇದ್ದರು.

ಮುಖ್ಯಾಂಶಗಳು
* ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗೀತಾ ಅಭಿಯಾನಕ್ಕೆ ಸಿದ್ಧತೆ
* ಕೋವಿಡ್ ಆತಂಕದ ನಂತರದ ಪ್ರಥಮ ಸಾರ್ವಜನಿಕ ಅಭಿಯಾನ
* ಸರಕಾರ ಹಾಗೂ ಜನ ಸ್ಪಂದನೆ‌ ಕೂಡ ಈ ಬಾರಿ ಹೆಚ್ಚು.
* ನ.೪ರಿಂದ‌ ಡಿ.೪ರ ತನಕ ಮೂರು ಹಂತದಲ್ಲಿ ಅಭಿಯಾನ
* ರಾಜ್ಯದ ಪ್ರತಿ ಜಿಲ್ಲಾ ಕಾರಾಗೃಹದಲ್ಲೂ ನಡೆಸಲು ತೀರ್ಮಾನ

ಕನ್ನಡ ಕಡ್ಡಾಯಕ್ಕೆ ಹೊಸ ಕಾನೂನು ಜಾರಿ; ಸಿಎಂ ಬೊಮ್ಮಾಯಿ ಘೋಷಣೆ

https://pragati.taskdun.com/politics/kannada-compulsorynew-lawcm-basavaraj-bommaividhanasabhe/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button