Kannada NewsLatest

ಚಲಿಸುವ ರೈಲಿನಲ್ಲೇ ಸಚಿವರಿಂದ ಪ್ರಗತಿ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬೆಳಗಾವಿ-ಹುಬ್ಬಳ್ಳಿ ಮಧ್ಯ ರೈಲಿನಲ್ಲಿ ಪ್ರಯಾಣಿಸುತ್ತ ಪ್ರಗತಿ ಪರಿಶೀಲನೆ ಮತ್ತು ನಿಲ್ದಾಣಗಳ ಪರಿಶೀಲನೆ ನಡೆಸಿದರು. 

ಬೆಳಗಾವಿಯಿಂದ ವಿಶೇಷ ರೈಲಿನಲ್ಲಿ ಹುಬ್ಬಳ್ಳಿಯವರೆಗೆ ಪ್ರಯಾಣ ಬೆಳೆಸಿದ ಸಚಿವರು, ರೈಲಿನಲ್ಲಿ ಪ್ರಯಾಣಿಸುತ್ತಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ ರೈಲು ನಿಲ್ದಾಣಗಳ ಪರಿಶೀಲನೆಯನ್ನೂ ನಡೆಸಿದರು.

ಹುಬ್ಬಳ್ಳಿ-ಬೆಳಗಾವಿ ಮಧ್ಯದ ರೈಲ್ವೆ ಮಾರ್ಗ ಸುಧಾರಣೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ನೈಋತ್ಯ ವಲಯ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ರೈಲಿನಲ್ಲಿಯೇ ಸಭೆ ನಡೆಸಿದರು. 

Home add -Advt

Related Articles

Back to top button