Kannada NewsKarnataka NewsLatest

ಬೆಳಗಾವಿಯಲ್ಲಿ 2 ದಿನ ಕಿತ್ತೂರು ಚನ್ನಮ್ಮ ನಾಟಕ: ಉಚಿತ ಪ್ರವೇಶ – ಡಾ.ರವಿ ಪಾಟೀಲ ಮಾಹಿತಿ

 ಪ್ರಗತಿವಾಹಿನಿ ಸು ದ್ದಿ, ಬೆಳಗಾವಿ: ಮಾ. 23 ಮತ್ತು 24ರಂದು ಬೆಳಗಾವಿಯಲ್ಲಿ ಕಿತ್ತೂರು ಚನ್ನಮ್ಮ ನಾಟಕ ನಡೆಯಲಿದೆ.
 ಕ್ಲಬ್ ರಸ್ತೆಯ ಸಿಪಿಐಡಿ ಮೈದಾನದಲ್ಲಿ  ಸಂಜೆ 5.20ರಿಂದ ರಾತ್ರಿ 8.40ಗಂಟೆಯವರೆಗೆ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ ಮೆಗಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಬಿಜೆಪಿ ಮೆಡಿಕಲ್ ಸೆಲ್ ಸಂಚಾಲಕ, ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ (ವಿಒಟಿಸಿ) ನಿರ್ದೇಶಕ, ನಾಟಕದ ಪ್ರಾಯೋಜಕತ್ವ ವಹಿಸಿಕೊಂಡಿರುವ ಡಾ.ರವಿ ಬಿ. ಪಾಟೀಲ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ರಂಗಾಯಣ ಮತ್ತು ವಿಒಟಿಸಿ ನೇತೃತ್ವದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಹೋರಾಟದ ದಿನಗಳನ್ನು ನೆನಪಿಸುವಂತೆ ಈ ನಾಟಕ ನಡೆಯಲಿದೆ. ಸಿಪಿಎಡ್ ಮೈದಾನದಲ್ಲಿ 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.
ಈ ಮೆಗಾ ನಾಟಕದಲ್ಲಿ ಆನೆ, ಕುದುರೆ, ಒಂಟೆಗಳು ಸಹ ಇದ್ದು, ಬೆಳಗಾವಿ, ಸವದತ್ತಿ, ಧಾರವಾಡ ಸೇರಿ ವಿವಿಧ ಜಿಲ್ಲೆಗಳ 300 ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದಾರೆ.  ಛತ್ರಪತಿ ಶಿವಾಜಿ ಮಹಾರಾಜರ ಜಾಣತಾ ರಾಜಾ ಮಾದರಿಯಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ ನಾಟಕ ಭವ್ಯವಾದ ವೇದಿಕೆಯ ಮೇಲೆ ಪ್ರದರ್ಶನಗೊಳ್ಳಲಿದೆ. ಮೂರೂವರೆ ಗಂಟೆಯ ನಾಟಕ ಇದಾಗಿದೆ. ಈಗಾಗಲೇ ನಾಟಕವು ಚಿಕ್ಕೋಡಿ, ಬೈಲಹೊಂಗಲ, ಸವದತ್ತಿ, ರಾಯಬಾಗ ಇತರ 20 ಭಾಗಗಳಲ್ಲಿ ಪ್ರದರ್ಶನಗೊಂಡಿದೆ. ಇದೀಗ ಬೆಳಗಾವಿ ನಗರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕಲಾವಿದರಿಗೆ ವಸತಿ, ಊಟದ ವ್ಯವಸ್ಥೆ ಹಾಗೂ ಪ್ರಾಣಿಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಚನ್ನಮ್ಮನ ತವರೂರು ಕಾಕತಿಗೆ ತೆರಳಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಡಾ.ರವಿ ಪಾಟೀಲ, ಚನ್ನಮ್ಮನ ವಂಶಸ್ಥರನ್ನು ಭೇಟಿ ಮಾಡಿ ನಾಟಕ ವೀಕ್ಷಣೆಗೆ ಬರುವಂತೆ ಆಹ್ವಾನಿಸಿದರು.
https://pragati.taskdun.com/belur-sri-chennakesava-templelist-of-unesco-world-heritage-sitescm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button