Kannada NewsKarnataka News

ಹುಕ್ಕೇರಿ ಹಿರೇಮಠದಲ್ಲಿ 25ನೇ ಮಾಸಿಕ ಸುವಿಚಾರ ಚಿಂತನ

 ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ : ನಗರದ ಲಕ್ಷ್ಮಿ ಟೇಕ್ ಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಡಿಸೆಂಬರ್ 1 ಸಂಜೆ 6 ಗಂಟೆಗೆ 25ನೇ ಮಾಸಿಕ ಸುವಿಚಾರ ಚಿಂತನಾ ಕಾರ್ಯಕ್ರಮ ಜರುಗಲಿದೆ.
 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶಿವಮೊಗ್ಗ ಜಿಲ್ಲೆಯ ಕವಲೇದುರ್ಗದ ಕೆಳದಿ ರಾಜಗುರು ಷ ಬ್ರ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ವಿಭೂತಿಪುರ ಸಂಸ್ಥಾನ ಮಠದ ಷ ಬ್ರ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯುವ ಬ್ರಿಗೆಡ್ ಸಂಸ್ಥಾಪಕರು ಖ್ಯಾತ ವಾಗ್ಮಿಗಳು, ಅಂಕಣಕಾರರು ಆದ ಚಕ್ರವರ್ತಿ ಸೂಲಿಬೆಲೆಯವರು “ರಾಷ್ಟ್ರ ಹಾಗೂ ಧರ್ಮ”  ಎಂಬ ವಿಚಾರ ಕುರಿತು ಉಪನ್ಯಾಸ ನೀಡಲಿದ್ದಾರೆ.
 ಮಾಜಿ ಶಾಸಕರಾದ ಸಂಜಯ ಪಾಟೀಲ್,  ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಅನೀಲ ಮುಳವಾಡಮಠ, ಕೊಪ್ಪಳದ ಎಸ್ ಆರ್ ನವಲಿಹಿರೇಮಠ, ರಾಯಬಾಗದ ಅರುಣ ಐಹೊಳೆ ಅವರು ಕಾರ್ಯಕ್ರಮದ  ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button