
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೆಳಗಾವಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಮುಂದೆ ಹಂತ ಹಂತವಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ದಕ್ಷಿಣ ಮತಕ್ಷೇತ್ರ ಹಾಗೂ ಉತ್ತರ ಮತಕ್ಷೇತ್ರಕ್ಕೆ ಸಂಬಂಧಿಸಿದ ಒಟ್ಟು ೨೬೪ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತರ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಕಾಮಗಾರಿಗಳ ವಿವರ : ಸ್ಮಾರ್ಟ್ ರೋಡ್ ಪ್ಯಾಕೇಜ್-೩ ರಾಮತೀರ್ಥ ನಗರ ೭ ರಸ್ತೆಗಳ ೪.೪೫ ಕಿಮೀ ಉದ್ದದ ಕಾಮಗಾರಿಯನ್ನು ರೂ. ೨೪.೦೩ ಕೋಟಿ ವೆಚ್ಚದಲ್ಲಿ ರಿಲಯನ್ಸ್ ರೋಡ್, ಸ್ಟೇಡಿಯಂ ಎದುರಿನ ರಸ್ತೆ, ಉದಯ ಶಾಲೆ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸ್ಮಾರ್ಟ್ ರೋಡ್ ಪ್ಯಾಕೇಜ್- ೪ರಲ್ಲಿ ರೂ.೩೪.೦೩ ಕೋಟಿ ವೆಚ್ಚದಲ್ಲಿ ಆರ್ಟಿಓ ವೃತ್ತದಿಂದ ಜಿಜಾಮಾತಾ ಚೌಕದವರೆಗೆ, ಮಾರ್ಕೆಟ್ ಪೋಲಿಸ್ ಸ್ಟೇಷನ್ದಿಂದ ಸರ್ಕಿಟ್ ಹೌಸ್ವರೆಗೆ, ತರಕಾರಿ ಮಾರ್ಕೆಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎನ್ಎಂವಿ ಪ್ಯಾಕೇಜ್-೧ ರಲ್ಲಿ ರೂ. ೬.೧೨ ವೆಚ್ಚದಲ್ಲಿ ೨.೬೫ ಕಿಮಿ (ಫುಟ್ ಪಾತ್ ಮತ್ತು ಸೈಕಲ್ ಟ್ರ್ಯಾಕ್) ಸಿಬಿಟಿಯಿಂದ ಕಣಬರಗಿ ರಸ್ತೆ ಸುರಭಿ ಹೊಟೇಲ್ವರೆಗೆ ನಗರ ಬಸ್ ನಿಲ್ದಾಣ ಕಟ್ಟಡ ತಳಮಹಡಿ, ನೆಲಮಹಡಿ, ೪ ಮಹಡಿ ಫೇಸ್-೧ ರಲ್ಲಿ ರೂ.೩೨.೨೩ ಕೋಟಿ ವೆಚ್ಚದಲ್ಲಿ ಒಟ್ಟು ನಿರ್ಮಿತ ಕ್ಷೇತ್ರ ೧೫೫೦೦ ಸ್ಕ್ವೇರ್ ಮೀಟರ್ ನಿರ್ಮಾಣವಾಗುತ್ತಿದೆ.
ಸ್ಮಾರ್ಟ್ ಬಸ್ ನಿಲ್ದಾಣ ಫೇಸ್-೨ ರಲ್ಲಿ ರೂ.೪.೮೦ ಕೋಟಿ ವೆಚ್ಚದಲ್ಲಿ ೧೫ ಬಸ್ ನಿಲುಗಡೆ ಸ್ಥಳಗಳು ನಿರ್ಮಾಣವಾಗಲಿವೆ ಹಾಗೂ ಫೇಸ್-೩ ರಲ್ಲಿ ರೂ.೧.೭೪ ಕೋಟಿ ವೆಚ್ಚದಲ್ಲಿ ೦೬ ಬಸ್ ನಿಲುಗಡೆ ಸ್ಥಳಗಳು ನಿರ್ಮಾಣವಾಗಲಿವೆ. ೧.೯೬ ಕೋಟಿ ವೆಚ್ಚದಲ್ಲಿ ಪ್ರೈವೇಟ್ ಬಸ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
ರೂ. ೨೨.೧೭ ಕೋಟಿ ವೆಚ್ಚದಲ್ಲಿ ೫೯.೬೯ ಕಿಮೀ ಯುಜಿಎಲ್ಟಿ ಕೇಬಲಿಂಗ್ ನ್ನು ಮಹಾಂತೇಶ್ ನಗರ,ಶ್ರೀನಗರ ಮತ್ತು ಆಂಜನೇಯ ನಗರದ ವರೆಗೆ ಮಾಡಲಾಗುತ್ತಿದೆ.
ದಕ್ಷಿಣ ವಲಯ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಕಾಮಗಾರಿಗಳ ವಿವರ : ೧೫೯೮೭.೬೫ ಸ್ಕ್ವೇರ್ ಮೀಟರ್ ಬಹು ಸಂಕೀರ್ಣ ವಾಣಿಜ್ಯ ಕಟ್ಟಡವನ್ನು ರೂ. ೪೬.೬೮ ಕೋಟಿ ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಕಪಿಲೇಶ್ವರ ಕಾಲನಿ ರಸ್ತೆ, ಎಸ್ ಪಿ ಎಮ್ ರಸ್ತೆ, ಮಹಾತ್ಮ ಫುಲೆ ರಸ್ತೆ, ಶುಕ್ರವಾರ ರಸ್ತೆ ಪೇಟೆ ರಸ್ತೆ ಹಾಗೂ ಇತರೆ ರಸ್ತೆಗಳನ್ನು ೫.೩೫ ಕೀ ಮೀ ಉದ್ದದಲ್ಲಿ ರೂ.೩೪.೦೩ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರೂ.೩೭.೯೬ ಕೋಟಿ ವೆಚ್ಚದಲ್ಲಿ ೫.೬೫ ಕಿ ಮೀ ಉದ್ದದ ಕಾಂಗ್ರೆಸ್ ರಸ್ತೆ ಹಾಗೂ ಇತರೆ ರಸ್ತೆಗಳ ನಿರ್ಮಾಣ. (ಫೇಸ್-೨)ರೂ. ೧೮.೬೧ ಕೋಟಿ ವೆಚ್ಚದಲ್ಲಿ ೧೫೬ ಎಕರೆ ಹೆರಿಟೇಜ್ ಪಾರ್ಕ್ ನಿರ್ಮಾಣ. (ಫೇಸ್ -೨)ರೂ. ೪.೮೦ ಕೋಟಿ ವೆಚ್ಚದಲ್ಲಿ ೬ ಸ್ಮಾರ್ಟ್ ಬಸ್ ನಿಲ್ದಾಣ ಸ್ಥಾಪನೆ. (ಫೇಸ್-೩)ರೂ. ೧.೭೪ ಕೋಟಿ ವೆಚ್ಚದಲ್ಲಿ ೮ ಸ್ಮಾರ್ಟ್ ಬಸ್ ನಿಲ್ದಾಣ ಸ್ಥಾಪನೆ ಮಾಡಲಾಗುವುದು.
ಲೋಕಸಭಾ ಸದಸ್ಯರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ಉಪ ಮಹಾಪೌರ ಮಧುಶ್ರೀ ಪೂಜಾರಿ, ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ, ವಿರೋಧ ಪಕ್ಷದ ಸಚೇತಕ ಮಹಾಂತೇಶ ಕವಟಗಿಮಠ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಸ್ಮಾರ್ಟ್ ಸಿಟಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗ ಜಿಯಾವುಲ್ಲಾ ಹಾಗೂ ಗಣ್ಯರು ಉಪಸ್ಥಿತರಿದ್ದರು.