Belagavi NewsBelgaum NewsKarnataka News
*ಈದ್ಗಾ ಮಿನಾರ್ ಹಾಗೂ ಗುಮ್ಮಜ ದ್ವಂಸ ಪ್ರಕರಣದಲ್ಲಿ 4 ಜನ ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ನಡೆದ ಈದ್ಗಾ ಮಿನಾರ್ ಹಾಗೂ ಗುಮ್ಮಜ ದ್ವಂಸ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಒಂದೂವರೆ ತಿಂಗಳ ಹಿಂದೆ ನಡೆದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತಿಬಸ್ತವಾಡ ಗ್ರಾಮದ ಲಕ್ಷ್ಮಣ ಉಚವಾಡೆ, ಮುತ್ತಪ್ಪ ಉಚವಾಡೆ, ಲಕ್ಷ್ಮಣ ನಾಯಕ, ಶಿವರಾಜ್ ಗುದ್ದಿ ಬಂಧಿತರು.
ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಅಪಹರಿಸಿಕೊಂಡು ಹೋಗಿದಕ್ಕೆ ದರ್ಗಾ ದ್ವಂಸ ಆರೋಪ ಮಾಡಲಾಗಿದೆ. ಹಿಂದೂ ಹುಡುಗಿ ಮದುವೆ ಆಗಿದ್ದ ಕಾರಣಕ್ಕೆ ದರ್ಗಾ ದ್ವಂಸ ಮಾಡಿದ್ದಾರೆ.