Latest
ರಾಜ್ಯದಲ್ಲಿ ಇಂದು 4 ಜನ ಬಲಿ, 257 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕದಲ್ಲಿ ಇಂದು ಕೊರೋನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದು, ಹೊಸದಾಗಿ 257 ಜನರಿಗೆ ಸೋಂಕು ಪತ್ತೆಯಾಗಿದೆ.
ಉಡುಪಿಯಲ್ಲಿ 92, ರಾಯಚೂರಿನಲ್ಲಿ 88, ಮಂಡ್ಯ 15, ಬೆಳಗಾವಿ 12 (ನಿನ್ನೆ ದಾಖಲಾಗಿದ್ದು), ಹಾಸನ 15, ದಾವಣಗೆರೆ 13 ಪ್ರಕರಣ ದಾಖಲಾಗಿದೆ.
ಬೆಳಗಾವಿಯ 12 ಜನರಲ್ಲಿ 11 ಜನರು ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದು, ಒಬ್ಬರು ಧಾರವಾಡ ಜಿಲ್ಲೆಯಿಂದ ಹಿಂದಿರುಗಿದವರು. 7 ಮಹಿಳೆಯರಿದ್ದಾರೆ.




