
5 ತಿಂಗಳ ಹಿಂದೆ ಅಪಘಾತಕ್ಕಿಡಾದ ಯುವಕನ ಸಾವು
ಪ್ರಗತಿವಾಹಿನಿ ಸುದ್ದಿ, ಅಗಸಗಿ :
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನಿಗೆ 5 ತಿಂಗಳಕಾಲ ಚಿಕಿತ್ಸೆ ನೀಡಿದರೂ ಉಳಿಸಿಕೊಳ್ಳಲಾಗಲಿಲ್ಲ. ಅಲ್ಲಿಂದಲೂ ಕೋಮಾದಲ್ಲೇ ಇದ್ದ ಯುವಕ ಇಂದು ಸಾವಿಗೀಡಾಗಿದ್ದಾನೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಯುವಕನೊಬ್ಬ 5 ತಿಂಗಳ ಹಿಂದೆ ದೇವಗಿರಿಯ ಹತ್ತಿರ ರಸ್ತೆಯಲ್ಲಿ ತೊಡಿದ್ದ ಗುಂಡಿಯಲ್ಲಿ ದ್ವಿಚಕ್ರ ವಾಹನ ಬಿದ್ದು ಅಪಘಾತಕ್ಕಿಡಾಗಿದ್ದರು. ಗಂಭಿರ ಗಾಯಗೊಂಡು ಕೋಮಾ ಸ್ಥಿತಿಗೆ ಜಾರಿದ ಯುವಕನಿಗೆ 5 ತಿಂಗಳುಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಸಾವಿಗಿಡಾಗಿದ್ದಾರೆ. ಮೃತರು ಪ್ರೀತಮ್ ಸುರೇಶ ಮಾಯಣ್ಣಾಚೆ (24). ಇವರು ಕಡೋಲಿ ಗ್ರಾಮದ ನಿವಾಸಿಯಾಗಿದ್ದು, ಇವರಿಗೆ ತಂದೆ, ತಾಯಿ, ಸಹೋದರ,ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.