Belagavi NewsBelgaum NewsKannada NewsKarnataka NewsNationalPolitics

*ಕಡವೆ ಬೇಟೆ ಆಡಿದ 9 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ: ಲೋಂಡಾ ವಲಯದ ನೇರಸೆ ಬೀಟ್‌ನಲ್ಲಿ ಒಂದು ಕಡವೆಯನ್ನು (Rusa unicolor) ಬೇಟೆಯಾಡಿದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು 9 ಜನರನ್ನು ಬಂಧಿಸಿದ್ದಾರೆ. 

ಗುರುವಾರ ಸಾಯಂಕಾಲ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಬಂದ ಕೂಡಲೆ 

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ನೇರಸೆ ಅರಣ್ಯ ಸರ್ವೆ ನಂಬರ್ 102 ರ ಪಕ್ಕದಲ್ಲಿರುವ ಮಾಲ್ಕಿ ಸರ್ವೆ ನಂಬರ್ 104/2 ರಲ್ಲಿ ಒಟ್ಟು 9 ಜನ ಆರೋಪಿಗಳು ಕಡವೆಯನ್ನು ಬೇಟೆಯಾಡಿರುವುದು ಬೆಳಕಿಗೆ ಬಂದಿದೆ. 

ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39, 44, 50, 51 ರ ಅಡಿಯಲ್ಲಿ ಲೋಂಡಾ ವಲಯ ಅಪರಾಧ ಸಂಖ್ಯೆ: 07/2025-26 ರಂತೆ ಪ್ರಕರಣ ದಾಖಲಿಸಿ, ಇಂದು ಆರೋಪಿಗಳನ್ನು ನ್ಯಾಲಯಕ್ಕೆ ಒಪ್ಪಿಸಲಾಗಿದೆ.

Home add -Advt

ರಂಜಿತ್ ಜೈಸಿಂಗ್ ದೇಸಾಯಿ, ಬಲವಂತ ನಾರಾಯಣ ದೇಸಾಯಿ, ಆತ್ಮಾರಾಮ ಯಲ್ಲಪ್ಪ ದೇವಳಿ, ಪ್ರಮೋದ ನಾಮದೇವ ದೇಸಾಯಿ, ದತ್ತರಾಜ ವಿಲಾಸ ಹವಾಲದಾರ, ಜ್ಞಾನೇಶ ಮಂಗೇಶ ಗಾವಡೆ, ಗೋವಿಂದ ರಾಮಚಂದ್ರ ದೇಸಾಯಿ, ಅಪ್ಪಿ ಇಂಗಪ್ಪಾ ಹಣಬರ, ಬರಾಪ್ಪಾ ಬಾಬು ಹಣಬರ ಎಂಬುವರನ್ನು ಬಂಧಿಸಲಾಗಿದೆ.

ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. 

ಕಾರ್ಯಾಚರಣೆಯಲ್ಲಿ ಖಾನಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸುನಿತಾ ನಿಂಬರಗಿ, ಖಾನಾಪುರ ವಲಯ ಅರಣ್ಯ ಅಧಿಕಾರಿ, ಶ್ರೀಕಾಂತ ಪಾಟೀಲ, ವಲಯ ಅರಣ್ಯ ಅಧಿಕಾರಿ ಸಯ್ಯದಸಾಬ ನಧಾಪ ಮತ್ತು 

ಲೋಂಡಾ ಉಪ ವಲಯ ಅರಣ್ಯಾಧಿಕಾರಿ  ವೈ.ಎಸ್ ಪಾಟೀಲ್ ಹಾಗೂ ಖಾನಾಪುರ ಮತ್ತು ಭೀಮಗಡ ವಲಯದ ಸಿಬ್ಬಂದಿ ಭಾಗವಹಿಸಿದ್ದರು.

Related Articles

Back to top button