Kannada NewsLatest

ವೀರಶೈವ ಲಿಂಗಾಯತ ವಧುವರರ 9ನೇ ಸಮಾವೇಶ ಸಮಾರಂಭ

ವೀರಶೈವ ಲಿಂಗಾಯತ ವಧುವರರ 9ನೇ ಸಮಾವೇಶ ಸಮಾರಂಭ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಕೆಎಲ್‍ಇ ಸಂಸ್ಥೆ ಹಾಗೂ ವೀರಶೈವ ಲಿಂಗಾಯತ ವಧುವರ ಅನ್ವೇಷಣಾ ಕೇಂದ್ರದ ಆಶ್ರಯದಲ್ಲಿ, ದಿನಾಂಕ 11.8.2019 ರಂದು ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ವಿಳಂಬ/ವಿಧವೆ/ವಿಧುರ/ಮರು ಮದುವೆ/ವಿಚ್ಛೇದಿತ ವಧುವರರ 9ನೇ ಸಮಾವೇಶವು ಜರುಗಿತು.

ಸಮಾಜ ಬಾಂಧವರ ಕಲ್ಯಾಣವನ್ನು ನೆರವೇರಿಸುವ ನಿಟ್ಟಿನಲ್ಲಿ ಸದಾ ಮುಂಚೂಣಿಯಲ್ಲಿರುವ ಕೆಎಲ್‍ಇ ಸಂಸ್ಥೆ ಹಾಗೂ ವೀರಶೈವ ಲಿಂಗಾಯತ ಮಹಾಸಭೆಯ ಈ ಕಾರ್ಯವನ್ನು ಪಾಲಕರು ಮನಸಾರೆ ಹಾರೈಸಿದರು. ವೇದಿಕೆಯ ಮೇಲೆ ವೀರಶೈವ ಲಿಂಗಾಯತ ವಧುವರ ಅನ್ವೇಷಣಾ ಕೇಂದ್ರ ಅಧ್ಯಕ್ಷರಾದ ಡಾ.ಎಫ್.ವ್ಹಿ.ಮಾನ್ವಿ, ಮಾಜಿ ಮೇಯರ್ ಡಾ.ಸಿದ್ದನಗೌಡ ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಬಿ.ವ್ಹಿ.ಕಟ್ಟಿ, ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ, ಕಲ್ಯಾಣರಾವ್ ಮುಚಳಂಬಿ, ಕಾರ್ಯದರ್ಶಿ ಸೋಮಲಿಂಗ ಮಾವಿನಕಟ್ಟಿ, ಆಶಾ ಯಮಕನಮರಡಿ, ಡಾ.ಭಾರತಿ ಮಠದ, ಗೀತಾ ಗುಂಡಕಲ್ಲೆ ಮುಂತಾದವರು ಉಪಸ್ಥಿತರಿದ್ದರು. ನೂರಾರು ವಧುವರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button