Kannada NewsLatest

ಮನೆ ಗೋಡೆ ಕುಸಿತ; ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಮೇಕೆಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಳೆಯ ಆರ್ಭಟಕ್ಕೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಮನೆಗೋಡೆ ಕುಸಿದು ಮೇಕೆ(ಆಡು) ಮಣ್ಣಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸುರೇಬಾನ ಗ್ರಾಮದ ನಿವಾಸಿ ಕಮಲವ್ವ ಆನಂದ ಕುಂಬಾರ ಇವರ ಮನೆಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ಸಂಬಂಧಿಸಿದೆ.

ಘಟನಾ ಸ್ಥಳಕ್ಕೆ ಗ್ರಾಪಂನ ಪಿಡಿಓ ಈರನಗೌಡ ಪಾಟೀಲ, ಗ್ರಾಮಲೆಕ್ಕಾಧಿಕಾರಿ ಬಿ.ಯು.ಬಾಗೇವಾಡಿ, ಪಶು ವೈದ್ಯಾಧಿಕಾರಿ ಡಾ. ಶಿವಯೋಗಿ ರೋಣದ, ಸುರೇಬಾನ ಉಪ ಠಾಣೆಯ ಹವಾಲ್ದಾರ ವ್ಹಿ.ಎಂ.ಹದ್ಲಿ ಪರಿಶೀಲನೆ ನಡೆಸಿದ್ದಾರೆ.

ಮನಿಹಾಳ ಗ್ರಾಪಂನ ವ್ಯಾಪ್ತಿಯಲ್ಲಿ 15, ಸುರೇಬಾನ ಗ್ರಾಪಂನ ವ್ಯಾಪ್ತಿಯಲ್ಲಿ 5 ಮನೆಗಳು ಸೋಮವಾರ ತಡರಾತ್ರಿ ಸಂಭವಿಸಿದ ಮಳೆಗೆ ಹಾನಿಯಾಗಿವೆ ಎಂದು ತಿಳಿದು ಬಂದಿದೆ.

Home add -Advt

ಸುರೇಬಾನ ಗ್ರಾಪಂನ ಪಿಡಿಓ ಈರನಗೌಡ ಪಾಟೀಲ ಮಾತನಾಡಿ, ನಮಗೆ ಈಗಷ್ಟೇ 5 ಮನೆಗಳು ಕುಸಿದಿರುವ ವಿಷಯ ತಿಳಿದು ಬಂದಿದೆ. ಇನ್ನು ಗ್ರಾಮದಲ್ಲಿ ಎಷ್ಟು ಮನೆಗಳು ಬಿದ್ದಿವೆ ಎಂಬುದು ಗ್ರಾಮಸ್ತರಿಂದ ನಮಗೆ ಅರ್ಜಿ ಬಂದ ನಂತರ ಇಂಜನಿಯರೊಂದಿಗೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

Related Articles

Back to top button