*ಹಿಂದಿನ ನ್ಯಾಯದಾನ ವ್ಯವಸ್ಥೆಯಲ್ಲಿ ಮಾನವೀಯ ವಿಚಾರಗಳಿಗೆ ಹೆಚ್ಚು ಮೌಲ್ಯ: ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ,  ಬೆಂಗಳೂರು :  ಹಿಂದಿನ ನ್ಯಾಯದಾನ ವ್ಯವಸ್ಥೆಯಲ್ಲಿ ಮಾನವೀಯ ಗುಣಗಳಿರುವ ವಿಚಾರಗಳಿಗೆ ಹೆಚ್ಚು ಮೌಲ್ಯ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಕಾನೂನು ಮತ್ತು ಸಂಸದೀಯ ಸುಧಾರಣಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ  ಹೊರತಂದಿರುವ ಶಾಸ್ತ್ರೀಯ ಭಾಷಾ ಯೋಜನೆಯ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ವಿಚಾರ  ಇತಿಹಾಸದಲ್ಲಿ ಕಂಡುಬಂದಿದೆ. ಕರ್ನಾಟಕ ಮಾನವ ಸಂಘ ಜೀವಿ, ಹೀಗಾಗಿ ನಾಗರೀಕತೆ ಬೆಳೆಸಿಕೊಂಡು ಬರಲಾಗಿದೆ. ಎಲ್ಲಿ ನಾಗರೀಕತೆ ಇದೆ ಅಲ್ಲಿ ನ್ಯಾಯದಾನದ ಅವಶ್ಯಕತೆ ಇದೆ.  ನ್ಯಾಯದಾನಕ್ಕೆ ತನ್ನದೇ  ಇತಿಹಾಸ ಪರಂಪರೆ ಇದೆ. ಅನಾದಿಕಾಲದಿಂದ ಹಿಡಿದು, ಮಧ್ಯ ಕಾಲ ಹಾಗೂ ಕಲಿಯುಗದಲ್ಲಿಯೂ ಕೂಡ ನ್ಯಾಯದಾನದ ವ್ಯವಸ್ಥೆ ಇದೆ. ಪ್ರಜಾಪ್ರಭುತ್ವದಲ್ಲಿ  ಈಗ ಕ್ರೋಢೀಕರಿಸಿದ ಶಾಸನ ರಚನೆ ಹಾಗೂ ನ್ಯಾಯದಾನದ ವ್ಯವಸ್ಥೆ ಇದೆ. ಕ್ರೋಢೀಕರಣ ಆಗದಿದ್ದರೂ ಕೂಡ ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ರಾಜರ ಕಾಲದಲ್ಲಿ  ನ್ಯಾಯದಾನ ಹೇಗಿತ್ತು, ರಾಣಿಯರ ಆಡಳಿತದಲ್ಲಿಯೂ ಕರ್ನಾಟಕದಲ್ಲಿ ಹೇಗೆ ಆಗಿತ್ತು ಎಂಬ ಪರಂಪರೆಯ ವಿಚಾರಗಳು ಪುಸ್ತಕದಲ್ಲಿ ಬಂದಿರುವುದು ಕಾನೂನು ಆಸಕ್ತಿ  ಇರುವವರಿಗೆ ಮಾರ್ಗದರ್ಶಿಯಾಗಲಿದೆ ಎಂದರು.
*ಗ್ರಂಥಾಲಯಗಳಿಗೆ ವಿತರಣೆ*
ಪಿ.ಹೆಚ್.ಡಿ ಮಾಡಿರುವ ವ್ಯಕ್ತಿ ಒಬ್ಬರು ಕಲ್ಯಾಣ ಚಾಲುಕ್ಯರ ಆಡಳಿತದಲ್ಲಿ ನ್ಯಾಯದಾನ ವ್ಯವಸ್ಥೆ ಹೇಗಿತ್ತು, ಪ್ರಜಾಪ್ರಭುತ್ವ ಹೇಗಿತ್ತು ಎಂದು 11 ನೇ ಶತಮಾನದ ಶಿಲಾಶಾಸನಗಳನ್ನು ಅಭ್ಯಾಸ ಮಾಡಿ ತಿಳಿಸಿದ್ದಾರೆ. ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ ಎನ್ನುವ ವ್ಯತ್ಯಾಸವನ್ನು 11 ನೇ ಶತಮಾನದಲ್ಲಿಯೇ  ಗುರುತಿಸಿರುವುದು ಗಮನಾರ್ಹ. ಅಂಥದ್ದೇ ವಿಚಾರಗಳು ಇಲ್ಲಿಯೂ ಕೂಡ ಇದೆ. ಈ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಕೊಟ್ಟು ಯುವಕರು ಓದಿ ನ್ಯಾಯ, ನ್ಯಾಯಾಂಗ ಹಾಗೂ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತಾಗಲಿ ಎಂದರು.
 ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಲೋಕೋಪಯೋಗಿ ಸಚಿವ  ಸಿ.ಸಿ.ಪಾಟೀಲ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಡಿಎಲ್ ಪಿಎ ನಿವೃತ್ತ ಕಾರ್ಯದರ್ಶಿ ದ್ವಾರಕಾನಾಥ್ ಬಾಬು  ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
https://pragati.taskdun.com/gujarathelection-resultcm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button