Karnataka News

*ಬಾಲಕನ ತಲೆಯನ್ನು ರಸ್ತೆಗೆ ಅಪ್ಪಳಿಸಿ ಕೊಂದ ಕಿರಾತಕ*

ಪ್ರಗತಿವಾಹಿನಿ ಸುದ್ದಿ, ಲಕ್ನೋ:

ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಬಾಲಕನ ತಲೆಯನ್ನು ಯುವಕನೊಬ್ಬ ರಸ್ತೆಗೆ ಅಪ್ಪಳಿಸಿ ಕೊಂದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಪ್ರತಾಪಘಡದ ಉದಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭಾಗವತ್ ಗ್ರಾಮದಲ್ಲಿ ಈ ಅಮಾನುಷ ಪ್ರಕರಣ ನಡೆದಿದೆ.

ಕಮಲೇಶ ಎಂಬ ರೈತನ 5 ವರ್ಷದ ಮಗ ಪ್ರಿಯಾಂಶು ಮೃತಪಟ್ಟ ಬಾಲಕ. ಆರೋಪಿ ಅರವಿಂದ ತಲೆ ಮರೆಸಿಕೊಂಡಿದ್ದು ಪೊಲೀಸರು ಆತನ ಬಂಧನಕ್ಕಾಗ ಶೋಧ ಕಾರ್ಯ ನಡೆಸಿದ್ದಾರೆ.

ಆಗಿದ್ದೇನು ?
ರೈತ ಕಮಲೇಶ ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಬಾಲ ಪ್ರಿಯಾಂಶು ಅಂಗಡಿಯಿಂದ ಸಾಮಾನು ತರಲು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ. ಇದೇ ವೇಳೆ ಅರವಿಂದ ಎಂಬ ಯುವಕ ತನ್ನ ಕುಟುಂಬದವರೊಂದಿಗೆ ಮನೆಯಲ್ಲಿ ಜಗಳ ಮಾಡುತ್ತಿದ್ದ.

Home add -Advt

 

ಅರವಿಂದನ ಮನೆ ಮುಂದೆ ಬಾಲಕ ಹಾದು ಹೋಗುತ್ತಿದ್ದಾಗ ಕುಟುಂಬದವರ ಮೇಲಿನ ಸಿಟ್ಟಿಗೆ ಅರವಿಂದ ಬಾಲಕ ಪ್ರಿಯಾಂಶುವಿನ ಎರಡೂ ಕಾಲುಗಳನ್ನು ಎತ್ತಿ ತಲೆಯನ್ನು ನೆಲಕ್ಕಪ್ಪಳಿಸಿದ್ದಾನೆ.

 

ಬಾಲಕನ ತಲೆ ಒಡೆದುಹೋಗಿದೆ. ಆರೋಪಿ ಅರವಿಂದ ಅಲ್ಲಿಂದ ಪರಾರಿಯಾಗಿದ್ದಾನೆ.
ಕೂಡಲೇ ಅಕ್ಕಪಕ್ಕದವರು ಸೇರಿ ಬಾಲಕನನ್ನು ವೈದ್ಯಕೀಯ ಕಾಲೇಜಿಗೆ ದಾಖಲು ಮಾಡಿದ್ದು, ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕದ್ದ ಆಭರಣ ಅಡವಿಟ್ಟಿದ್ದ ಭೂಪ ! ಹೆಡೆಮುರಿ ಕಟ್ಟಿದ ಬೆಳಗಾವಿ ಪೊಲೀಸರು

https://pragati.taskdun.com/belagavi-police-arrested-2-natorius-thieves/

*ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ; ತಂದೆಯನ್ನೇ ಕೊಲೆಗೈದು, ದೇಹವನ್ನು 30 ತುಂಡುಗಳನ್ನಾಗಿ ಕತ್ತರಿಸಿ ಬಿಸಾಕಿದ್ದ ಮಗ*

https://pragati.taskdun.com/bagalakotesonmurderfather/

Related Articles

Back to top button