Latest

*ಮೆಂಥೋಪ್ಲಸ್ ಡಬ್ಬಿ ನುಂಗಿದ 9 ತಿಂಗಳ ಕಂದ; ದಾರುಣ ಸಾವು*

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಕಂದಮ್ಮ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ.

ಮುತ್ಯಾಲ ರಾಘವೇಂದ್ರ ಹಾಗೂ ತುಳಸಿ ದಂಪತಿಯ 9 ತಿಂಗಳ ಮಗು ಪ್ರಿಯದರ್ಶಿನಿ ಮೃತ ಕಂದಮ್ಮ. ಆಟವಾಡುತ್ತಿದ್ದ ಮಗು ಕೈಗೆ ಸಿಕ್ಕ ಮೆಂಥೋಪ್ಲಸ್ ಚಿಕ್ಕ ಡಬ್ಬಿಯನ್ನು ಬಾಯಿಗೆ ಹಾಕಿಕೊಂಡಿದೆ. ಡಬ್ಬಿ ಗಂಟಲಲ್ಲಿ ಸಿಲುಕಿ ಮಗು ಉಸಿರಾಡಲಾಗದೇ ಪರದಾಡುತ್ತಿದ್ದಾಗ ಪೋಷಕರು ವೈದ್ಯರ ಬಳಿ ಕರೆದೊಯ್ದಿದ್ದಾರೆ.

ಮಗುವನ್ನು ಪರೀಕ್ಷಿಸಿದಾಗ ಮಗು ಆಸ್ಪತ್ರೆಗೆ ಬರುವ ಮೊದಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೆಂಥೋಪ್ಲಸ್ ಡಬ್ಬಿ ಮಗುವಿನ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಮುತ್ಯಾಲ ರಾಘವೇಂದ್ರ ಹಾಗೂ ತುಳಸಿ ದಂಪತಿಗೆ ಮದುವೆಯಾಗಿ 10 ವರ್ಷಗಳ ಬಳಿಕ ಮಗುವಾಗಿತ್ತು. ಆದರೆ 9 ತಿಂಗಳ ಮಗು ಈಗ ದುರಂತ ಅಂತ್ಯ ಕಂಡಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

Home add -Advt

https://pragati.taskdun.com/biperjoy-cyclonekarnatakakeralagujarathalert/

Related Articles

Back to top button