Kannada NewsKarnataka News

ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಣೆ

ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಣೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇಲ್ಲಿಯ ನಿಯತಿ ಫೌಂಡೇಶನ್ ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ತೆರಳಿ ಕಿಟ್ ಗಳನ್ನು ವಿತರಿಸುತ್ತಿದೆ.
ರಗ್ಗು, ಟವೆಲ್ ಮತ್ತು ನೀರಿನ ಬಾಟಲಿ ಇರುವ ಕಿಟ್ ತಯಾರಿಸಿದ್ದು, ಅವುಗಳನ್ನು ಅಗತ್ಯ ಇರುವವರಿಗೆ ವಿತರಿಸಲಾಗುತ್ತಿದೆ.
ಈವರೆಗೆ ಸುಮಾರು ಒಂದು ಸಾವಿರ ಇಂತಹ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.
ಡಾ.ಸಮೀರ್ ಸರ್ನೋಬತ್, ಶ್ರೀಜ್ಯೋತ್ ಸರ್ನೋಬತ್, ಪ್ರಿಯಾಂಕ ಅಜರೇಕರ್, ಸ್ನೇಹಾ, ಕೀರ್ತಿ ಸುರಂಜನ್, ದೀಪಾ ಪ್ರಭು ದೇಸಾಯಿ, ಭಾಸ್ಕರ್ ಪಾಟೀಲ ಮೊದಲಾದವರು ಕಿಟ್ ವಿತರಣೆಯಲ್ಲಿ ತೊಡಗಿದ್ದಾರೆ. ಜ್ಯೋತಿ ನಗರ, ಖಾನಾಪುರ ತಾಲೂಕಿನ ಹಳ್ಳಿಗಳಲ್ಲಿ ಕಿಟ್ ವಿತರಿಸಲಾಗಿದೆ.
ಪ್ರತಿ ಕಿಟ್ ಗೆ 200 ರೂ. ವೆಚ್ಚ ತಗುಲಲಿದ್ದು, ಆಸಕ್ತರು ದೇಣಿಗೆ ನೀಡಬಹುದು ಎಂದು ನಿಯತಿ ಫೌಂಡೇಶನ್ ತಿಳಿಸಿದೆ.
ಬ್ಯಾಂಕ್ ವಿವರ –
Niyathi foundation graminabhivruddhi sansthe
RBL bank
 Saving account
409000833171
IFSC  RATN0000024
Club road branch
*Paytm no 9632613269*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button