Kannada NewsKarnataka NewsLatest

*ಸಿ ಎಂ ಪದಕಕ್ಕೆ ಯುನಿವರ್ಸಲ್ ಕಾಲೇಜಿನ ಎನ್ ಸಿ ಸಿ ಕೆಡೆಟ್ ಗಳು ಆಯ್ಕೆ*

ಪ್ರಗತಿವಾಹಿನಿ ಸುದ್ದಿ; 2 ಕರ್ನಾಟಕ ಬೆಟಾಲಿಯನ್ ಆರ್ಮಿ ವಿಂಗ್ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಬೆಂಗಳೂರು ಇಲ್ಲಿನ ಎನ್ ಸಿ ಸಿ ಕೆಡೆಟ್ ಗಳಾದ ಜುವೊ ಫಜಲ್ ಎಸ್ ನದಾಫ್ (II ಬಿಕಾಂ) ಮತ್ತು ಜುವೊ ಸುಜಲ್ ಶಂಖಲಾ (III ಬಿಎ) ಮುಖ್ಯಮಂತ್ರಿಗಳ ಶ್ಲಾಘನಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಎನ್ ಸಿ ಸಿಯಲ್ಲಿ ಅಸಾಧಾರಣ ಸೇವೆಗಾಗಿ ಅತ್ಯಂತ ಅರ್ಹ ಕೆಡೆಟ್ ಗಳಿಗೆ ಮುಖ್ಯಮಂತ್ರಿಗಳ ಶ್ಲಾಘನಾ ಪದಕವನ್ನು ನೀಡಲಾಗುತ್ತದೆ.

ಕಾಲೇಜಿನ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ, ಪ್ರಾಂಶುಪಾಲ ನವೀನ್ ಪ್ರಸಾದ್, ಸಹಾಯಕ ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಓಂಕಾರ್ ಅವರು ಇಬ್ಬರೂ ಸಾಧಕರನ್ನು ಅಭಿನಂದಿಸಿದ್ದಾರೆ

Home add -Advt

Related Articles

Back to top button