ಬಿಜೆಪಿ ಮೊದಲ ವಿಕೇಟ್ ಪತನ: ರಾಜಿನಾಮೆಗೆ ಸಿ.ಟಿ.ರವಿ ನಿರ್ಧಾರ

ಬಿಜೆಪಿ ಮೊದಲ ವಿಕೇಟ್ ಪತನ: ರಾಜಿನಾಮೆಗೆ ಸಿ.ಟಿ.ರವಿ ನಿರ್ಧಾರ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್ ಪತನವಾಗಿದೆ.

ನಿರೀಕ್ಷಿತ ಖಾತೆ ಸಿಗದ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ರಾಜಿನಾಮೆಗೆ ನಿರ್ಧರಿಸಿದ್ದಾರೆ. ಸರಕಾರಿ ಕಾರನ್ನು ವಾಪಸ್ ಕಳಿಸಿರುವ ರವಿ, ನಾಳೆಯೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸಿ.ಟಿ.ರವಿಗೆ ಪ್ರವಾಸೋದ್ಯಮ ಮತ್ತು ಕನ್ನಡ, ಸಂಸ್ಕೃತಿ ಇಲಾಖೆ ನೀಡಲಾಗಿತ್ತು. ಆದರೆ ಆ ಖಾತೆ ಅವರಿಗೆ ತೃಪ್ತಿ ತಂದಂತಿಲ್ಲ.

ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಮಂತ್ರಿಸ್ಥಾನ ನೀಡಿದಾಗಲೇ ಬಿಜೆಪಿಯ ಹಲವು ಶಾಸಕರು ತೀವ್ರ ಅಸಮಾಧಾನ ಹೊಂದಿದ್ದರು. ಈಗ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು ಪಕ್ಷದಲ್ಲಿ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಬಹುದೆೇ ಎನ್ನುವ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ – ಮೂವರು ಉಪಮುಖ್ಯಮಂತ್ರಿ, ಬೊಮ್ಮಾಯಿಗೆ ಗೃಹ

ಇಬ್ಬರಿಗೆ ಸಚಿವ ಸ್ಥಾನ: ತಣ್ಣಗಾಗುತ್ತಾ ಅಸಮಾಧಾನದ ಹೊಗೆ?

ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button