Belagavi NewsBelgaum NewsKannada NewsKarnataka News

*ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹಾಯ್ದು ಓರ್ವ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣಪತಿ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದರೆ ಮತ್ತೋರ್ವನಿಗೆ ಗಂಭಿರ ಗಾಯವಾಗಿರುವ ಘಟನೆ ಬೆಳಗಾವಿ ನಗರದಲ್ಲಿ ತಡ ರಾತ್ರಿ ನಡೆದಿದೆ. 

ಈ ಘಟನೆಯಲ್ಲಿ ಗಣಪತಿ ನೋಡಲು ಬಂದಿದ್ದ ಸುಳಗಾ ನಿವಾಸಿಗಳಾದ ವಿಜಯ ರಾಜಗೋಳಕರ್ (55) ಗೆ ಗಂಭೀರ ಗಾಯವಾಗಿದೆ.‌ ಸದಾನಂದ ಚವ್ಹಾಣ ಪಾಟೀಲ್ (48) ಎಂಬುವರು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ನಗರದ ಪಾಟೀಲ್ ಮಾಳಾ ಗಣಪತಿಯ ವಿಸರ್ಜನೆ ವೇಳೆ ಇಬ್ಬರು ವ್ಯಕ್ತಿಗಳು ಗಣಪತಿ ನೋಡಲು ಬಂದಿದ್ದರು. ಇದೇ ವೇಳೆ ಪಾಟೀಲ್ ಮಾಳಾ ಗಣಪತಿಯ ವಿಸರ್ಜನೆಗೆ ಸಾಗುತ್ತಿದ್ದ ಟ್ರ್ಯಾಕ್ಕರ್ ಚಾಲಕನ ನಿರ್ಲಕ್ಷ್ಯದಿಂದ  ಇಬ್ಬರು ವ್ಯಕ್ತಿಗಳ ಮೇಲೆ ಹರಿದಿದೆ. ಮೃತ ವ್ಯಕ್ತಿಯನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಗಾಯವಾದ ವ್ಯಕ್ತಿಗೆ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button