Belagavi NewsBelgaum NewsKannada NewsKarnataka NewsLife Style

*ಸಂಸ್ಕೃತ ಸಂಭಾಷಣ ಶಿಬಿರದ ಅಭಿಯಾನ ಸಮಾರೋಪ ಸಮಾರಂಭ ಮುಕ್ತಾಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ದೈವಜ್ಞ ಮಂಗಳ ಕಾರ್ಯಾಲಯದಲ್ಲಿ ಇಂದು ಸಂಸ್ಕೃತ ಸಂಭಾಷಣ ಶಿಬಿರಗಳ ಅಭಿಯಾನದ ಸಮಾರೋಪ ಸಮಾರಂಭ ಯಶಸ್ವಿಯಾಗಿ ಮುಕ್ತಾಯಗೊಂಡಿತು. 

ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಮತ್ತು ಸಂಸ್ಕೃತ ಪ್ರೇಮಿಗಳು ಉತ್ಸಾಹದಿಂದ ಪಾಲ್ಗೊಂಡರು.‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಣವ್ ಪಿತ್ರೆ ಮಹಾವಿದ್ಯಾಲಯ ಉಪನ್ಯಾಸಕರು ಉಪಸ್ಥಿತರಿದ್ದರು. ಮುಖ್ಯ ವಕ್ತಾರರಾಗಿ ಕರ್ನಾಟಕ ಉತ್ತರ ಪ್ರಾಂತದ ಸಹಮಂತ್ರಿಯಾದ ಶ್ರೀಕಾಂತ್ ಕುಲಕರ್ಣಿ ಹಾಗೂ ಬೆಳಗಾವಿ ನಗರ ಅಧ್ಯಕ್ಷರಾದ  ಶ್ರೀಧರ್ ಗುಮ್ಮಾನಿ ಅವರು ವೇದಿಕೆಯ ಮೇಲೆ ಇದ್ದರು.

ಮುಖ್ಯ ವಕ್ತಾರರಾದ ಶ್ರೀಕಾಂತ್ ಕುಲಕರ್ಣಿ ಅವರು ಮಾತನಾಡಿ, ಸಂಸ್ಕೃತವು ನಮ್ಮ ಎಲ್ಲ ಭಾರತೀಯ ಭಾಷೆಗಳ ಮೂಲ ಭಾಷೆಯಾಗಿದ್ದು, ಅದರ ಮೌಲ್ಯವನ್ನು ನಾವು ಮರೆತಿದ್ದೇವೆ. ಇದು ಈಗ ಪುನಃ ಜೀವಂತವಾಗಬೇಕೆಂದು ನಾವೆಲ್ಲರೂ ಅದಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು. ಅತಿಥಿಗಳು ಸಂಸ್ಕೃತವು ವೈಜ್ಞಾನಿಕ ಭಾಷೆ ಎಂದು ಹೇಳಿದರು, ಸಂಸ್ಕೃತ ಭಾಷೆಯಿಂದ ಸಂಸ್ಕೃತಿಯನ್ನು ಉಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.

ಅಧ್ಯಕ್ಷರು ನಗರದ ವಿವಿಧ ಸ್ಥಳಗಳ ಜವಾಬ್ದಾರಿ ಘೋಷಣೆ ಮಾಡಿದರು. ಈ ಅಭಿಯಾನದ ಯಶಸ್ಸಿಗಾಗಿ ಬೆಳಗಾವಿ ನಗರದ ಕಾರ್ಯಕರ್ತರು ಮತ್ತು ವಿಶೇಷವಾಗಿ ಯುವಕರು ಬಹಳಷ್ಟು ಶ್ರಮಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button