Film & EntertainmentKannada NewsKarnataka News

ಪಶ್ಚಿಮ ಘಟ್ಟ ಹಸಿರು ಸಿರಿಗೆ ಬಾನ್ಸುರಿಯ ಬಾಗಿನ: ಶಿರಸಿಯಲ್ಲಿ ವಿಶೇಷ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಪಶ್ಚಿಮ ಘಟ್ಟ ಹಸಿರು ಸಿರಿಗೆ ಬಾನ್ಸುರಿಯ ಬಾಗಿನ ಎಂಬ ವಿಶೇಷ ಕಾರ್ಯಕ್ರಮದಡಿ ಅಕ್ಟೋಬರ್ 19, ಶನಿವಾರ ಪಂ. ಪ್ರವೀಣ್ ಗೋಡ್ಖಿಂಡಿ ಹಾಗೂ ಶಡಜ್ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಕಾರ್ಯಕ್ರಮ ಶಿರಸಿ ನಗರದ ಟಿ. ಆರ್. ಸಿ. ಸಭಾಭವನದಲ್ಲಿ ಸಂಜೆ ೬.೩೦ ರಿಂದ ನಡೆಯಲಿದೆ. ತಬಲಾ ಕಲಾವಿದರಾಗಿ ಪಂ. ಕಿರಣ್ ಗೋಡ್ಖಿಂಡಿ ಭಾಗವಹಿಸಲಿದ್ದಾರೆ.
೨೦.೧೦.೨೦೨೪ ರವಿವಾರ ಮೆಣಸಿ ಸೀಮೆಯ ಸಹಕಾರಿ ಸಂಘದ ಸಭಾಭವನ ವಾನಳ್ಳಿಯಲ್ಲಿ ಪಂ. ಪ್ರವೀಣ್ ಗೋಡ್ಖಿಂಡಿ ಹಾಗೂ ಪಂ. ಕಿರಣ್ ಗೋಡ್ಖಿಂಡಿ ಸಂಜೆ ೬.೩೦ ರಿಂದ ಕಾರ್ಯಕ್ರಮ ನೀಡಲಿದ್ದಾರೆ.
ಜಾಗತಿಕ ಹವಾಗುಣ ಹಿನ್ನೆಲೆಯಲ್ಲಿ ನಿಸರ್ಗಾಧಾರಿತ ಪರಿಹಾರಗಳು ಮತ್ತು ಜೀವನೋಪಾಯ ಕ್ರಮಗಳು ಈ ವಿಷಯವಾಗಿ ಜನಸಹಭಾಗಿತ್ವದ ಅಗತ್ಯ ಪ್ರತಿಪಾದಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಪಶ್ಚಿಮ ಘಟ್ಟಗಳ ಕುರಿತ ಮಾಹಿತಿ ಕೈಪಿಡಿಯನ್ನು ಕಲಾವಿದರು ಬಿಡುಗಡೆಗೊಳಿಸಲಿದ್ದಾರೆ.
ಪ್ರವೇಶ ಉಚಿತವಾಗಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button