Latest

*ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಗರ್ಭಿಣಿಯರಲ್ಲಿ ಇಲಿಜ್ವರ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲೇ ಎಚ್ಚೆತ್ತ ರಾಜ್ಯ ಸರ್ಕಾರ ತನಿಖೆಗೆ ತಜ್ಞರ ತಂದ ರಚಿಸಿತ್ತು. ತನಿಖಾ ವರದಿಯಲ್ಲಿ ಸಿಜೇರಿಯನ್ ವೇಳೆ ನಿಡುವ ಐವಿ ಧ್ರಾವಣ ದೋಷವೇ ಬಾಣಂತಿಯರ ಸಾವಿಗೆ ಕಾರಣ ಎಂದು ತಿಳಿದುಬಂದಿತ್ತು. ಈ ಘಟನೆ ಬಳಿಕ ಇದೀಗ ಆಸ್ಪತೆಯಲ್ಲಿ ದಾಖಲಾಗಿದ್ದ ಮೂವರು ಗರ್ಭಿಣಿಯರಲ್ಲಿ ಇಲಿ ಜ್ವರ ಕೂಡ ಪತ್ತೆಯಾಗಿದೆ.

ನವೆಂಬರ್ 9ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 7 ಗರ್ಭಿಣಿಯರಲ್ಲಿ ಹೆರಿಗೆ ಬಳಿಕ ನಾಲ್ವರು ಸಾವನ್ನಪ್ಪಿದ್ದರು. ಅವರಲ್ಲಿ ಮೂವರಲ್ಲಿ ಇಲಿಜ್ವರ ಪತ್ತೆಯಾಗಿದೆ.

ಮೂವರ್ ಪೈಕಿ ಇಬ್ಬರು ಹೆರಿಗೆಯಾಗಿ ಇಲಿಜ್ವರದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಓರ್ವ ಬಾಣಂತಿಗೆ ಆಸ್ಪತ್ರೆಯಲ್ಲಿಯೇ ಚಿಕಿಇತ್ಸೆ ಮುಂದುವರೆದಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ಗಂಗಾಧರ ತಿಳಿಸಿದ್ದಾರೆ.

Home add -Advt

Related Articles

Back to top button