Kannada NewsKarnataka NewsLatest

ಕ್ರಿಮಿನಲ್ ಮೊಸಳೆಯನ್ನು ರಂಗಮಂದಿರಕ್ಕೆ ತಂದು ಕಟ್ಟಿ ಹಾಕಿದ ಯುವಕರು

ಪ್ರಗತಿವಾಹಿನಿ ಸುದ್ದಿ, ನಂದೇಶ್ವರ (ಅಥಣಿ) – ಗ್ರಾಮದ ಮುಬಾರಕ ಅಪ್ಪಾಲಾಲ್ ಮುಲ್ಲಾ ವಯಸ್ಸು ೨೫ ವರ್ಷ ಎಂಬ ಯುವಕನ ಮೇಲೆ ಮೊಸಳೆ ಎರಗಿ ತೊಡೆಯ ಭಾಗ ಕಚ್ವಿ ಗಾಯಗೊಳಿಸಿದೆ.
ಸೋಮವಾರ ಗ್ರಾಮದ ವಸತಿ ಹತ್ತಿರ ದನಗಳಿಗೆ ಮೇವು ತರಲು ಹೋದಾಗ ಗದ್ದೆಯಲ್ಲಿ ಅಡಗಿ ಕುಳಿತಿದ್ದ  ಮೊಸಳೆ ಕಚ್ಚಿ ಗಾಯಗೊಳಿಸಿದೆ. ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಥಣಿ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ.
ಕೃಷ್ಣಾ ನದಿಯಲ್ಲಿ ಆಗಸ್ಟ್ ತಿಂಗಳಲ್ಲಿ ಪ್ರವಾಹ ಬಂದಾಗ ಅನೇಕ ಮೊಸಳೆಗಳು ಕಬ್ಬಿನ ಗದ್ದೆ ಸೇರಿವೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಎಂದಿನಂತೆ ತನ್ನ ದನಕರುಗಳಿಗೆ ಮೇವು ತರಲು ಹೋದಾಗ ಈ ಘಟನೆ ಸಂಭವಿಸಿದೆ. ಗ್ರಾಮದ ಯುವಕರು ಮೊಸಳೆಯನ್ನು ಸೇರೆ‌ಹಿಡಿದು ಗ್ರಾಮದ ರಂಗ ಮಂದಿರದಲ್ಲಿ ತಂದು ಕಟ್ಟಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button