Kannada NewsKarnataka NewsLatest

ಬಿಜೆಪಿ ಗೆಲ್ಲಿಸಿ ಗುಲಾಲ್ ಹಾರಿಸುವವರೆಗೆ ವಿಶ್ರಮಿಸುವುದಿಲ್ಲ

ಪ್ರಗತಿವಾಹಿನಿ ಸುದ್ದಿ, ಅಥಣಿ  -ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಸಹಜವಾಗಿ ಹೊಸ ಕಾರ್ಯಕರ್ತರು ಪರಸ್ಪರ ಸಮ್ಮಿಲನವಾದಾಗ ಮೂಲ ಕಾರ್ಯಕರ್ತರ ಹಾಗೂ ಹೊಸ ಕಾರ್ಯಕರ್ತರಲ್ಲಿ ಅಲ್ಪಮಟ್ಟಿನ ಗೊಂದಲವಿರುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
 ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸುವ ಹಿನ್ನೆಲೆಯಲ್ಲಿ ಜೆ ಎ ಕಾಲೇಜಿನಲ್ಲಿ  ಸಭೆಯ ಸಿದ್ಧತೆ ಕಾರ್ಯವನ್ನು ಪರಿಶೀಲಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
 ನಾನು ಮೊದಲು 2004 ರಲ್ಲಿ ಜೆಡಿಯುನಲ್ಲಿ ಇದ್ದಾಗ ಇಂತಹ ಅನುಭವ ನನಗಿದೆ. ಅಲ್ಲದೆ ನಾಳೆ ಮುಖ್ಯಮಂತ್ರಿಗಳ ಕಾರ್ಯಕ್ರಮ ಇರುವುದರಿಂದ ನಮ್ಮಲ್ಲಿ ಹೊಸ ಹುರುಪು ಹುಮ್ಮಸ್ಸು ತುಂಬಿದೆ . ಈ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಇವರು ವಿಜಯಿಯಾಗಿ ಗುಲಾಲು ಹಾರಿಸುವವರೆಗೆ  ನಾವು ವಿಶ್ರಮಿಸುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ, ಅಥಣಿ ಮತಕ್ಷೇತ್ರದ ಚುನಾವಣಾ ಉಸ್ತುವಾರಿ ಶ್ರೀಕಾಂತ್ ಕುಲಕರ್ಣಿ ಹಾಗೂ ಶಶಿಕಾಂತ ನಾಯಕ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಶೀಲ್ ಕುಮಾರ ಪತ್ತಾರ ಇನ್ನಿತರರು ಉಪಸ್ಥಿತರಿದ್ದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button