Belagavi NewsBelgaum NewsKannada NewsKarnataka News
*ವಿದ್ಯುತ್ ಸ್ಪರ್ಶಿಸಿ ಮೂರು ಎಮ್ಮೆ, ಒಂದು ಕುದುರೆ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರಿ ಮಳೆ ಗಾಳಿಗೆ ವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ, ಹಾಗೂ ಒಂದು ಕುದರೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಈ ಅವಘಟ ಸಂಭವಿಸಿದೆ. ಗ್ರಾಮದ ಶಂಕರ ಸಮಗಾರ ಎಂಬುವವರಿಗೆ ಸೇರಿದ ಎಮ್ಮೆಗಳು ಹಾಗೂ ಕುದುರೆಯನ್ನು ಶೆಡ್ ನಲ್ಲಿ ಕಟ್ಟಲಾಗಿತ್ತು. ಜೋರಾಗಿ ಬಿಸಿದ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ದನಗಳ ಮೇಲೆ ಬಿದ್ದಿದೆ.
ಈ ವೇಳೆ ಮೂರು ಎಮ್ಮೆ, ಒಂದು ಕುದುರೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿವೆ. ಕುಟುಂಬಕ್ಕೆ ಆಸರೆಯಾಗಿದ್ದ ಎಮ್ಮೆಗಳನ್ನ ಕಳೆದುಕೊಂಡ ಕುಟುಂಬ ಕಣ್ಣೀರು ಹಾಕುವಂತಾಗಿದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.