
ಪ್ರಗತಿವಾಹಿನಿ ಸುದ್ದಿ: ಮೊನ್ನೆಯಷ್ಟೇ ಅಂಗನವಾಡಿ ಕಾರ್ಯಕರ್ತರ ಗೌರವ ಧನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದ ಬಿಹಾರ ಸರ್ಕಾರ ಇಂದು ಬಿಸಿಯೂಟ ತಯಾರಕ ಅಡುಗೆ ಸಿಬ್ಬಂದಿಗಳ ಗೌರವಧನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡುತ್ತಿದೆ. ಬಿಸಿಯೂಟ ತಯಾರಕರ ಗೌರವ ಧನವನ್ನು 1500 ರಿಂದ 3500 ರೂಗೆ ಹೆಚ್ಚಳ ಮಾಡಿದೆ,
ಶಾಲೆಗಳಿಗೆ ರಾತ್ರಿ ಕಾವಲುಗಾರರ ಗೌರವ ಧನವನ್ನು 5000 ರೂಪಾಯಿಯಿಂದ 10,000 ರೂಪಾಯಿಗೆ ಏರಿಕೆ ಮಾಡಿದೆ. ಇನ್ನು ದೈಹಿಕ ಶಿಕ್ಷಣ, ಆರೋಗ್ಯ ಬೋಧಕರಿಗೂ 8000 ರೂ ಇದ್ದ ವೇತನವನ್ನು 16,000 ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.