*ಡಾ.ಪ್ರಭಾಕರ ಕೋರೆಯವರು ಸಮಾಜಕ್ಕೆ ಮಹಾಬೆಳಕಾಗಿದ್ದಾರೆ : ಗವಿಸಿದ್ಧೇಶ್ವರ ಮಹಾಸ್ವಾಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭೂಮಿಗೆ ಬಿದ್ಧ ಫಲ, ಎದೆಗೆ ಬಿದ್ದ ಅಕ್ಷರ ಎರಡೂ ಕೂಡ ಫಲಕೊಡುತ್ತವೆ. ನಾವು ಫಲಕೊಡುವ ವ್ಯಕ್ತಿಗಳಾಗಬೇಕು. ಬದುಕಿನಲ್ಲಿ ಶ್ರಮಪಡಬೇಕು. ಹುಟ್ಟು ಸಾವುಗಳ ನಡುವಿನ ಈ ಬದುಕು ಕ್ಷಣಿಕ ಇದನ್ನು ಅರ್ಥಪೂರ್ಣಗೊಳಿಸಬೇಕು ಡಾ.ಪ್ರಭಾಕರ ಕೋರೆಯವರು ಸಮಾಜಮುಖಿಯಾಗಿ ಬದುಕನ್ನು ಭವ್ಯತೆಗೇರಿಸಿಕೊಂಡವರು ಎಂದು ಕೊಪ್ಪಳ ಗವಿಸಿದ್ಧೇಶ್ವರಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.

ಅವರು ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ 78ನೇ ಹುಟ್ಟಹಬ್ಬ ನಿಮಿತ್ತ ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆಕಾರಖಾನೆ, ಬಾವನ್ಸೌಂದತ್ತಿಯ ಶಿವಶಕ್ತಿ ಶುಗರ್ಸ ಲಿಮಿಡೆಟ್, ಯಡ್ರಾಂವದ ಹರ್ಮ್ ಡಿಸ್ಟಿಲರಿ ಪ್ರಾವೈಟ್ ಲಿಮಿಡೆಟ್, ಅಂಕಲಿಯ ಡಾ.ಪ್ರಭಾಕರ ಕೋರೆ ಕೋಆಪ್ರೇಟಿವ್ ಕ್ರೇಡಿಟ್ ಸೊಸಾಯಿಟಿ, ಕೆಎಲ್ಇ ಸಂಸ್ಥೆಯ ಅಂಗಸಂಸ್ಥೆಗಳು, ಜನಶಕ್ತಿ ಫೌಂಡೇಶನ, ಬೆಳಗಾವಿಯ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಒಬ್ಬ ವ್ಯಕ್ತಿಯ ಹುಟ್ಟು ಹಬ್ಬವಾಗಬೇಕು. ಪ್ರಕೃತಿಯ ಪ್ರತಿಯೊಂದರಲ್ಲಿಯೂ ನಿತ್ಯೋತ್ಸವವಿದೆ. ಹಾಗಾಗಿ ಮನುಷ್ಯನ ಬದುಕಿನಲ್ಲಿಯೂ ನಿತ್ಯೋತ್ಸವ ಇರಬೇಕು. ದೇವರು ಕೊಟ್ಟ ಈ ಬದುಕನ್ನು ಹಸನಾಗಿಸಬೇಕು. ದೇವರು ಕೊಟ್ಟದ್ದನ್ನು ನಾವು ಸ್ವೀಕರಿಸಿ ಸಮಾಜಕ್ಕೆ ಸರ್ವೋತ್ತಮವಾದುದನ್ನು ನೀಡಬೇಕು. ಡಾ.ಕೋರೆಯವರು ಬದುಕಿನುದ್ದಕ್ಕೂ ಅರ್ಪಿಸುವ ಕೆಲಸ ಮಾಡಿದ್ದಾರೆ. ಮೊಬೈಲ ಗೀಳು ಬಹಳ ಕೆಟ್ಟದ್ದು, ಮೊಬೈಲ ಹೇಳುತ್ತೆ ತಲೆ ತಗ್ಗಿಸುವದನ್ನು, ಪುಸ್ತಕ ಹೇಳುತ್ತೆ ತಲೆ ಎತ್ತಿ ನಿಲ್ಲುವದನ್ನು ಕಳಿಸುತ್ತದೆ.

ಪ್ರಭಾಕರ ಎಂಬ ಹೆಸರಿನಲ್ಲಿಯೇ ಬೆಳಕು ಅಡಗಿದೆ. ಅವರು ಸಮಾಜಕ್ಕೆ ಮಹಾಬೆಳಕಾಗಿದ್ದಾರೆ. ನಾವು ಅಳಿದರೂ ಸಮಾಜವು ನಮ್ಮ ಸ್ಮರಿಸುವಂತ ಕೆಲಸವನ್ನು ಮಾಡಬೇಕೆಂದು ತಿಳಿಸಿದರು. ನನ್ನದು ಎಂಬುದನ್ನು ಮರೆದು ಎಲ್ಲವೂ ಸಮಾಜದ್ದು ದೇವರು ಕೊಟ್ಟದ್ದು ಎಂಬ ಭಾವ ಹೃದಯದಲ್ಲಿ ಮಡುಗಟ್ಟಿದರೆ ಬದುಕು ಸುಂದರ. ಸಾವಿಗೆ ಭಯಪಡದೆ ನಿಸರ್ಗ ಕೊಟ್ಟ ಬದುಕನ್ನು ಅಮರವನ್ನಾಗಿ ಮಾಡಬೇಕು ಜ್ಞಾನ ಹಾಗೂ ಆತ್ಮಸಂಪತ್ತನ್ನು ಗಳಿಸಬೇಕು. ಪುಣ್ಯವನ್ನು ಪಡೆಯುವುದು ಹಾಗೂ ಸಮಾಜಕ್ಕೆ ಅದರ ಫಲಗಳನ್ನು ಕೊಟ್ಟುಹೋಗುವ ಕೆಲಸ ಮಾಡಬೇಕು. ಡಾ.ಕೋರೆಯವರು ತಾವು ಬದುಕಿನಲ್ಲಿ ಪಡೆದ ಭಾಗ್ಯವನ್ನು ಸಮಾಜಕ್ಕೆ ಹಂಚಿದ್ದಾರೆ. ಅವರು ನೂರು ವರ್ಷ ಆರೋಗ್ಯವಾಗಿ ಬದುಕಿ ಸಮಾಜಕ್ಕೆ ಮತ್ತುಷ್ಟು ಕೊಡುಗೆಯನ್ನು ನೀಡಲೆಂದು ಹೇಳಿದರು.
ಕೊಲ್ಲಾಪುರ ಜೈನಮಠದ ಸ್ವಸ್ತಿಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡುತ್ತಾ, ಯಾರೂ ಬಡವರಾಗಿ ಸಾಯಬಾರದು. ಸಮಾಜ ಸೇವೆ ಮುಖ್ಯವಾಗಬೇಕು. ಪ್ರೀತಿ ವಾತ್ಸಲ್ಯ ಬಹಳಷ್ಟಿದೆ. ಜೀವನದಲ್ಲಿ ಹೋರಾಟ ಇದೆ. ಸಮಾಜದ ಬಗ್ಗೆ ಕಳಕಳಿ ಇದೆ. ವಯಸ್ಸಾದರು ಕೂಡ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತ ಎಲ್ಲರ ಮೇಲೆ ವಿಶ್ವಾಸ ಇಟ್ಟು ಮುನ್ನಡೆಯುತ್ತಿದ್ದಾರೆ. 41 ವರ್ಷದಲ್ಲಿ 310ಕ್ಕೂ ಅಧಿಕ ಅಂಗಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಬೆಳಗಾವಿ ಮತ್ತು ರಾಜ್ಯವನ್ನು ಶೈಕ್ಷಣಿಕವಾಗಿ ಉತ್ತುಂಗಕ್ಕೇರಿಸಿದ್ದಾರೆ. ಅನೇಕ ಮಹಾನರು ಆಗಿ ಹೋಗಿದ್ದಾರೆ. ಆದರಂತೆ ಕೋರೆ ಅವರ ಕೊಡುಗೆ ಅಪಾರ. ಕನಸ ಕಾಣಬೇಕು. ಅದನ್ನು ಪೂರ್ತಿ ಮಾಡಬೇಕು. ಅವರು ಯುವಕರಿಗೆ ಪ್ರೇರಣಾದಾಯಿ. 78 ವರ್ಷದಲ್ಲಿಯೂ ಯುವಕರಂತೆ ಕಾರ್ಯ. ಡಾ.ಕೋರೆಯವರು ಎಲ್ಲ ಕಷ್ಟಸುಖಗಳನ್ನು ಎದುರಿಸಿ ಸಮಾಜಕ್ಕೆ ಮೌಲಿಕವಾದುದನ್ನು ಕೊಟ್ಟಿದ್ದಾರೆ. ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ಅವರದು ಬಹುದೊಡ್ಡ ಕೊಡುಗೆ ಎಂದು ನುಡಿದರು.
ಸಮಾರಂಭವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿಯವರು ಮಾತನಾಡಿ 40 ವರ್ಷಗಳಲ್ಲಿ ಕೆಎಲ್ಇ ಸಂಸ್ತೆಯನ್ನು ಉತ್ತುಂಗಕ್ಕೇರಿಸಿ, ಕಲೆ, ಶಿಕ್ಷಣ, ಆರೋಗ್ಯ, ವೈದ್ಯಕೀಯ ಹಾಗೂ ಸಂಶೋಧನೆಯ ಮೂಲಕ ಜನಸೇವೆ ಮಾಡುತ್ತಿದ್ದಾರೆ, ಹಲವಾರು ಹುದ್ದೆಗಳನ್ನು ಅಲಂಕರಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ ಅವರಿಗೆ ಇನ್ನೂ ದೇವರು ಆಯುಷ್ಯಾರೋಗ್ಯ ದಯಪಾಲಿಸಲಿ ಎಂದು ಹಾರೈಸಿದರು. ನಾವಿಬ್ಬರೂ ಜೊತೆಗೆ ಕಲಿತವರು ಸಮಾಜದ ನೆಲೆಗಳಲ್ಲಿ ಸೇವೆಯನ್ನು ಸಲ್ಲಿಸಿದವರು. ನಮ್ಮ ವಿಚಾರಗಳು ಕಾರ್ಯಗಳು ಸಮಾಜಮುಖಿಯಾದಂತಹವು. ಕೋರೆಯವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಲಿ ಎಂದು ಹೇಳಿದರು.

ಡಾ. ಪ್ರಭಾಕರ ಕೋರೆ ನುಡಿ
ಕಿತ್ತೂರು ನಾಡಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲು ಪ್ರಕಾಶ ಹುಕ್ಕೇರಿ ಅವರ ಕೊಡುಗೆಯಿದೆ. ಜನ್ಮ ಕೊಟ್ಟ ಊರಿನ ಋಣ, ತಂದೆ ತಾಯಿಯವನ್ನು ಸದಾ ಸ್ಮರಿಸುತ್ತೇನೆ. ನಮ್ಮ ತಂದೆ ಮರಾಠಿ ಶಾಲೆ ಪ್ರಾರಂಭಿಸಿದರು. ನಮ್ಮ ಕುಟುಂಬದಲ್ಲಿ ನಾನು ಕನ್ನಡ ಕಲಿತ ಮೊದಲಿಗ. ಶಿಕ್ಷಣದಲ್ಲಿ ಫೇಲಾದರೂ ನಾನು ಮುಂದುವರೆಸಿದೆ. ಭಾಷೆ ಅಭಿಮಾನ ಇರಲಿ, ದ್ಷೇಷ ಬೇಡ. ನಾವು ಯಾವಾಗಲೂ ಎಲ್ಲ ಭಾಷೆಗಳನ್ನು ಪ್ರೀತಿಸುವವರು. ವಿಶ್ವಕನ್ನಡ ಸಮ್ಮೇಳನ ಮಾಡಿದ್ದೇವೆ. ಕನ್ನಡ ಭವನದ ಮೂಲಕ ಎಲ್ಲ ಭಾಷೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ. ಶಿಕ್ಷಣಕ್ಕೆ ಶ್ರೀಮಂತಿಕೆ ಬಡತನ ಇರಲಿಲ್ಲ. ಆದರೂ ಇಂದಿನ ಶಿಕ್ಷಣ ವ್ಯತ್ಯಾಸವೆನಿಸುತ್ತಿದೆ. ಸಿನಿಮಾ ಹುಚ್ಚಿನಿಂದ ಹಳ್ಳಿಯಲ್ಲಿ ಸಿನಿಮಾ ಥೇಟರ ಮಾಡಿದೆ. ರಾಜ್ಯದಲ್ಲಿಯೇ ಇದೊಂದು ಥೇಟರ ಹಳ್ಳಿಯಲ್ಲಿಯೇ ನಡೆಯುತ್ತಿದೆ. ಕನ್ನಡ ಸಿನಿಮಾ ಹಾಕುವದು ಕಠಿಣ ಇತ್ತು. ಕೇವಲ ಮರಾಠಿ ಇತ್ತು. ಈ ಭಾಗದಲ್ಲಿ ಕನ್ನಡ ಪಸರಿಸಲು ಮಯೂರ ಚಿತ್ರ ಮಂದಿರ ಕಾರಣ. ಮೊದಲನೇ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭ. ಚುನಾವಣೆ ಮೂಲಕ ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ, 84ರಲ್ಲಿ ಕಾರ್ಯಾಧ್ಯಕ್ಷರಾಗಿ ಬಂದೆ. ಶಿಕ್ಷಣ ಸಂಸ್ಥೆ ನಡೆಸಲು ಗೊತ್ತಿರಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಉ.ಕ ಮಹಾರಾಷ್ಟ್ರ ಪ್ರತಿಯೊಂದು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆ ಮಾಡಿದೆ. ನನ್ನ ಅಣ್ಣ ತೀರಿಕೊಂಡ ನಂತರ ಹೃದ್ರೋಗಕ್ಕೆ ಚಿಕಿತ್ಸೆ ನೀಡುವ ಸೌಲಭ್ಯ ಸೇರಿದಂತೆ 1000ಸಾವಿರ ಹಾಸಿಗೆಗಳ ಮೂಲಕ 1996ರಲ್ಲಿ ಚಿಕಿತ್ಸೆ ಪ್ರಾರಂಭ ಮಾಡಿದೆ. ನಂತರ 1200 ಹಾಸಿಗೆಗಳ ಮೂಲಕ ಉಚಿತ ಚಿಕಿತ್ಸೆ ನೀಡಿದೆ. 1200 ಹಾಸಿಗೆಗಳ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗುತ್ತಿದೆ. ಭಗವಂತ ನೀಡಿದ ಅವಕಾಶದಿಂದ ಸಂಸ್ಥೆಯನ್ನು ಬೆಳೆಸಿದೆ. ಹಲವಾರು ಸಂಘರ್ಷಗಳನ್ನು ಕಂಡೆ. ನನ್ನ ಶ್ರೀಮತಿಯವರು ಕೌಟುಂಬಿಕ ಜವಾಬ್ದಾರಿಯನ್ನು ಹೊತ್ತು, ಸಮಾಜಸೇವೆಗೆ ಅವಕಾಶ ಮಾಡಿಕೊಟ್ಟರು. ಕೆಎಲ್ಇ ಸಂಸ್ಥೆಯಿಂದ ನಾನು ಜೀವನದಲ್ಲಿ ಏನೆಲ್ಲವನ್ನೂ ಸಾಧಿಸಿದೆ. ಬೆಳೆದೆ. ಸಪ್ತರ್ಷಿಗಳ ಆಶೀರ್ವಾದ, ಹಿರಿಯರ ಮಾರ್ಗದರ್ಶನ ದಾನಿಗಳ ಮಹಾದಾನಿಗಳ ಕೊಡುಗೆ ನನ್ನ ಬೆಳವಣಿಗೆ ಬಹಳವಿದೆ. ಅವರೆಲ್ಲರ ಕೃಪೆಯಿಂದ ಕೆಎಲ್ಇ ಸಂಸ್ಥೆಯು ಬೆಳೆದಿದೆ. ನಾನು ಸದಾ ನನ್ನೂರಿಗೆ ಸಂಸ್ಥೆಗೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.
ಪ್ರತಿವರ್ಷ ನನ್ನ ಹುಟ್ಟುಹಬ್ಬವನ್ನು ಅಂಕಲಿಯಲ್ಲಿ ಬಹಳ ಅರ್ಥಪೂರ್ಣವಾಗಿ ಆಯೋಜಿಸುತ್ತಾ ಬಂದಿದ್ದಾರೆ. ಎಲ್ಲ ಸಂಘಟಕರಿಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಅವರು ಮಾತನಾ, ಶಿಕ್ಷಣದಲ್ಲಿ ಫೇಲಾದ ವ್ಯಕ್ತಿ ಇಂದು ಹಲವಾರು ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡುವ ವ್ಯಕ್ತಿಯಾಗಿ ಬೆಳೆದಿದ್ದಾರೆ. ಡಾ. ಕೋರೆ ಅವರು ಉ. ಕ ಭಾಗದಲ್ಲಿ ಸರಕಾರಿ ಶಾಲೆಗಳು ಕಡಿಮೆ. ದಕ್ಷಿಣದಲ್ಲಿ ಮಹಾರಾಜರರಿಂದ ಸರಕಾರಿ ಶಾಲೆಗಳ ಅಧಿಕವಾಗಿದ್ದವು. ಉತ್ತರದಲ್ಲಿ ಸಂಸ್ಥೆಗಳು ಶಿಕ್ಷಣ ನೀಡಿ ಇಂದು ಈ ಭಾಗವನ್ನು ಶೈಕ್ಷಣಿಕೆವಾಗಿ ಉತ್ತುಂಗಕ್ಕೇರಿಸಿದ್ದಾರೆ. ಅಮೇರಿಕದಲ್ಲಿ ಕೂಡ ಅನೇಕ ಕೆಎಲ್ಇ ವಿದ್ಯಾರ್ಥಿಗಳು. ಬಸವಣ್ಣನವರ ಕಾಯಕದಂತೆ ಡಾ. ಕೋರೆ ಅವರ ದೂರದೃಷ್ಟಿಯ ಫಲ ಕೆಎಲ್ಇ. ಇಂದು ವೈದ್ಯಕೀಯ ಸಂಶೋಧನೆ, ಕೃಷಿಯಲ್ಲಿ ಸಾಧನೆ. ಸರಕಾರದ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಾಕಷ್ಟು ಮಾಡಿದ್ದಾರೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯತೆ ಇಂದು ಶೈಕ್ಷಣಿಕೆ ಸೇವೆಸಲ್ಲಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ರಾಜು ಕಾಗೆ, ಗಣೇಶ ಹುಕ್ಕೇರಿ ಮಾತನಾಡಿದರು. ಡಾ.ಪ್ರಭಾಕೊರ ಕೋರೆ ಕೋ-ಆಫ್ರೇಟಿವ್ ಕ್ರೇಡಿಟ್ ಸೊಸಾಯಿ ಅಂಕಲಿಯವರು 5 ಲಕ್ಷ ರೂ.ಗಳನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರಿಗೆ ಹಾಗೂ ಆಶಾ ಕೋರೆಯವರಿಗೆ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರಖಾನೆ ಚಿಕ್ಕೋಡಿ ಹಾಗೂ ಡಾ.ಪ್ರಭಾಕರ ಕೋರೆ ಕೋ.ಆಫದ್ ಕ್ರೇಡಿಟ್ ಸೊಸಾಯಿಟಿ ಲಿ. ಪದಾಧಿಕಾರಿಗಳು ಸತ್ಕರಿಸಿ ಅಭಿನಂದಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಮಹೇಶ ಗುರನಗೌಡರ, ಗಂಗಾ ಅರಭಾವಿ ನಿರೂಪಿಸಿದರು. ಡಿ.ಎಸ್.ಕರೋಶಿ ವಂದಿಸಿದರು.
ಇದೇ ಸಂದರ್ಭದಲ್ಲಿ ಅಂಕಲಿಯಲ್ಲಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಜರುಗಿತು. 8800 ಜನರು ಪ್ರಯೋಜನ ಪಡೆದರು. 800 ಜನರಿಗೆ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿದೆ. ಅಂತೆಯೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. 320ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿದರು.

ಅಂತೆಯೆ ಜಂಗಿ ನಿಖಾಲಿ ಕುಸ್ತಿಯನ್ನು ಆಯೋಜಿಸಲಾಗಿತ್ತು. 78 ಕುಸ್ತಿ ಪಟುಗಳು ದೇಶ ವಿದೇಶದಿಂದ ಆಗಮಿಸಿದ್ದರು.
ವೇದಿಕೆಯ ಮೇಲೆ ಹುಟ್ಟುಹಬ್ಬ ಸಮಿತಿಯ ಅಧ್ಯಕ್ಷರಾದ ಬಿ.ಆರ್.ಪಾಟೀಲ, ಮಲ್ಲಿಕಾರ್ಜುನ ಕೋರೆ, ಭರತೇಶ ಬನವಣೆ, ಸುರೇಶ ಪಾಟೀಲ, ಶಂಕರಣ್ಣ ಮುನವಳ್ಳಿ, ಜಯಾನಂದ ಮುನವಳ್ಳಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಆಸ್ಪತ್ರೆಯ ನಿರ್ದೇಶಕರಾದ ನಿ.ಕರ್ನಲ್ ಡಾ. ಎಂ. ದಯಾನಂದ, ಡಾ.ವ್ಹಿ.ಡಿ.ಪಾಟೀಲ, ಡಾ.ನಿರಂಜನಾ ಮಹಾಂತಶೆಟ್ಟಿ, ಡಾ.ಪ್ರೀತಿ ದೊಡವಾಡ ಉಪಸ್ಥಿತರಿದ್ದರು.