Kannada NewsKarnataka NewsLatest

*ಧರ್ಮಸ್ಥಳ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಶೋಧದ ವೇಳೆ ಮರದಲ್ಲಿ ಹಗ್ಗ, ಸೀರೆ, ಮೂಳೆಗಳು ಪತ್ತೆ*

ನೇಣು ಬಿಗಿದ ಬಗ್ಗೆ ಶಂಕೆ

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಮಾವ ವಿಠಲ ಗೌಡ ತೋರಿಸಿರುವ ಬಂಗ್ಲಗುಡ್ಡದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ನಡೆಸಿದ್ದು, ಈ ವೇಳೆ ರಾಶಿ ರಾಶಿ ಮೂಳೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.

ಬಂಗ್ಲಗುಡ್ಡದ ದಟ್ಟ ಅರಣ್ಯದಲ್ಲಿ 5 ಕಡೆ ಮೂಳೆಗಳು, ಬುರುಡೆ ಸಿಕ್ಕಿದೆ. ಇದೇ ವೇಳೆ ಒಂದು ಕಡೆ ಮರದ ಬಳಿ ಅಸ್ಥಿಪಂಜರ, ಹಿರಿಯ ನಾಗರಿಕರ ಕಾರ್ಡ್, ಮರದ ಮೇಲೆ ಎರಡು ಹಗ್ಗ, ಸೀರೆ ಪತ್ತೆಯಾಗಿದೆ. ನೇಣು ಬಿಗಿದಿರುವ ಅನುಮಾನ ವ್ಯಕ್ತವಾಗಿದೆ.

Home add -Advt

ಸದ್ಯ ಎಸ್ ಐಟಿ ಟೀಂ ಎಲ್ಲಾ ವಸ್ತು, ಮೂಳೆಗಳನ್ನು ಸಂಗ್ರಹಿಸಿ ಕಾನೂನು ಪ್ರಕಾರ ತನಿಖೆ ಮುಂದುವರೆಸಿದೆ. ಇದು ಧರ್ಮಸ್ಥ ಕೇಸ್ ಗೆ ಮತ್ತೊಂದು ರೀತಿಯ ತಿರುವು ನೀಡಿದೆ.


Related Articles

Back to top button