Kannada NewsKarnataka NewsLatest

*ಡಿಪೋ ಮ್ಯಾನೇಜರ್ ಸೇರಿ 9 ಸಿಬ್ಬಂದಿ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಕುಡಿದು ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಡ್ರೈವರ್ ಗಳಿಂದ ಲಂಚ ಪಡೆದು ಡ್ಯೂಟಿ ಹಾಕುತ್ತಿದ್ದ ಬಿಎಂಟಿಸಿ ಡಿಪೋ ಮ್ಯಾನೇಜರ್ ಸೇರಿದಂತೆ 9 ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಘಟಕ ವ್ಯವಸ್ಥಾಪಕ ಎಂ.ಜಿ.ಕೃಷ್ಣ, ಸಂಚಾರ ನಿರೀಕ್ಷಕ ಶ್ರೀನಿವಾಸ್, ಅರುಣ್ ಕುಮಾರ್, ಕಿರಿಯ ಸಹಾಯಕಿ ಪ್ರಭಾ ಕೆ.ಎಸ್, ಕರ್ನಾಟಕ ರಾಜ್ಯ ಸಾರಿಗೆ ಹವಾಲ್ದಾರ್ ಮಂಜುನಾಥ್ ಎಂ, ಮಂಜುನಾಥ್, ಚೇತನ್ ಕುಮಾರ್, ಪುನೀತ್ ಕುಮಾರ್, ಲಕ್ಷ್ಮೀ ಕೆ ಸಸ್ಪೆಂಡ್ ಆದವರು.

ಬಿಎಂಟಿಸಿ ಚಾಲಕರು ಕುಡಿದು ಡ್ರೈವ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ವೇಳೆ ಲಂಚ ಪಡೆದು ಅಧಿಕಾರಿಗಳು ಕುಡಿದು ಬಂದ ಚಾಲಕರಿಗೆ ಡ್ಯೂಟಿ ಹಾಕುತ್ತಿರುವುದು ಗೊತ್ತಾಗಿದೆ.

Home add -Advt

Related Articles

Back to top button