Kannada NewsKarnataka NewsLatest

*ಉಗ್ರ ಸಂಘಟನೆಯೊಂದಿಗೆ ಸಂಪರ್ಕ: ಬಳ್ಳಾರಿಯಲ್ಲಿ ಚಾಲಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದೊದ್ದ ಆರೋಪದಲ್ಲಿ ಬಳ್ಳಾರಿಯಲ್ಲಿ ಚಾಲಕನೊಬ್ಬನನ್ನು ಬಂಧಿಸಲಾಗಿದೆ.

ಬಳ್ಳಾರಿಯ ಅಬ್ದುಲ್ ಸಲಾಂ (36) ಬಂಧಿತ ಆರೋಪಿ. ಆಂಧ್ರಪ್ರದೇಶದ ವಿಜಯವಾಡ ಪೊಲೀಸರು ಅಬ್ದುಲ್ ಸಲಾಂ ನನ್ನು ಬಂಧಿಸಿದ್ದಾರೆ. ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ವಿಜಯವಾಡದ ಮೊಹಮ್ಮದ್ ರೆಹಮತ್ ಉಲ್ಲಾ ಶರೀಫ್ ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಬಳ್ಳಾರಿಯ ಅಬ್ದುಲ್ ಸಾಲಾಂ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಈ ಹಿನ್ನೆಲೆಯ;ಲಿ ಶೋಧನಾ ವಾರೆಂಟ್ ನೊಂದಿಗೆ ಬಂದ ವಿಜಯವಾಡ ಪೊಲೀಸರು ಅಬ್ದುಲ್ ಸಲಾಂ ನನ್ನು ಬಂಧಿಸಿದ್ದಾರೆ. ಬಳ್ಳಾರಿಯ ಕೌಲ್ ಬಜಾರ್ ಠಾಣೆಗೆಗೆ ಹಾಜರುಪಡಿಸಿ ಕೋರ್ಟ್ ಆದೇಶದಂತೆ ಆಂಧ್ರಪರ್ದೇಶಕ್ಕೆ ಕರೆದೊಯ್ಯಲಾಗಿದೆ.

Home add -Advt

Related Articles

Back to top button