ಕಾರವಾರ ಬಂದರು ವಿಸ್ತರಣೆ ಪುನರ್ ವಿಮರ್ಶೆ ಮಾಡಿ -ಸ್ವರ್ಣವಲ್ಲೀ ಶ್ರೀ

 ಪ್ರಗತಿವಾಹಿನಿ ಸುದ್ದಿ, ಶಿರಸಿ: ಕಾರವಾರ ಬಂದರು ವಿಸ್ತರಣಾ ಯೋಜನೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಯೋಜನೆ ಬಗ್ಗೆ ಕಾರವಾರದ ಮೀನುಗಾರರು ಆತಂಕಕ್ಕೆ ಒಳಗಾಗಿದ್ದು ಈ ಯೋಜನೆಯಿಂದ ಮೀನುಗಾರರಬುದುಕಿಗೆ
ತೀವ್ರ ತೊಂದರೆ ಆಗಲಿದೆ ಎಂದು ನಿರಂತರ ಸತ್ಯಾಗ್ರಹ ಚಳುವಳಿ ನಡೆಸುತ್ತಿದ್ದಾರೆ. ಕಾರವಾರದ ನಾಗರಿಕರು ಸಹಾ ಬಂದರು ವಿಸ್ತರಣಾ ಯೋಜನೆ ಅಸಾಧು, ಅವ್ಯವಹಾರಿಕ ಎಂದು ವಿರೋಧ ವ್ಯಕ್ತ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾರವಾರ ಬಂದರು ವಿಸ್ತರಣಾ ಯೋಜನೆ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು ಎಂದು ಕೋರಿದ್ದಾರೆ.
ಅಭಿವೃದ್ಧಿ ಯೋಜನೆಗಳು ಮೀನುಗಾರರ ಬದುಕಿಗೆ ತೊಂದರೆ ತರಬಾರದು. ಕರಾವಳಿ ಪ್ರದೇಶದ ರೈತರು ಮೀನುಗಾರರ ಹಿತರಕ್ಷಣೆ ಜೊತೆ ಅಭಿವೃದ್ಧಿ ಯೋಜನೆಗಳು ಆಗುವಂತೆ ತಾವು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button