Karnataka NewsLatestPolitics

*ಭ್ರಷ್ಟಾಚಾರಿಗಳು, ಫೇಮೆಂಟ್ ಕೋಟಾದಲ್ಲಿ ಬಂದವರೇ ತುಂಬಿಕೊಂಡಿರುವ ಹೊಸ ಸಚಿವ ಸಂಪುಟ: ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ಪ್ರತಿಭಟನೆ: ಆರ್.ಅಶೋಕ್ ಕಿಡಿ*

ಹೊಸ ಸಚಿವ ಸಂಪುಟದಲ್ಲಿ ಭ್ರಷ್ಟಾಚಾರಿಗಳು ತುಂಬಿಕೊಂಡಿದ್ದು, ಅನೇಕರು ಪೇಮೆಂಟ್‌ ಮೂಲಕ ಬಂದು ಸೇರಿದ್ದಾರೆ. ಸಚಿವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಮುಖ್ಯಮಂತ್ರಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಿಂದೆಂದೂ ಕಂಡಿರದ ಸಚಿವ ಸಂಪುಟ ರಚನೆಯಾಗಿದೆ. ಪರಿಶಿಷ್ಟರ 187 ಕೋಟಿ ರೂ. ಲೂಟಿ ಮಾಡಿ ಚುನಾವಣೆಗೆ ಬಳಸಿರುವುದು ಖಚಿತವಾಗಿದೆ. ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದರು. ಈ ಪ್ರಕರಣದಲ್ಲಿ ಬಿ.ನಾಗೇಂದ್ರ ಜೈಲಿಗೆ ಹೋದರೂ, ಈಗ ಮತ್ತೆ ಸಚಿವ ಸಂಪುಟ ಸೇರಿದ್ದಾರೆ. ಅವರಿಗೆ ಕ್ಲೀನ್ ಚಿಟ್ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.

ಹಳೆ ಸಿಎಂ ಅವರನ್ನು ತೆಗೆದುಹಾಕಿದರೆ, ಹೊಸ ಸಿಎಂ ವಾಷಿಂಗ್‌ ಮಿಶನ್‌ ಬಳಸಿ ತೊಳೆದು ಕರೆದುಕೊಂಡಿದ್ದಾರೆ. ಕರಾವಳಿ-ಮಲೆನಾಡು ಭಾಗಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಅಲ್ಲಿ ನಾವು ಹೇಗಿದ್ದರೂ ಸೋಲಲಿದ್ದೇವೆ ಎಂಬುದನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಾದಗಿರಿ, ರಾಯಚೂರು, ವಿಜಯನಗರ, ಕೋಲಾರ, ಚಿಕ್ಕಬಳ್ಳಾಪುರ ಮೊದಲಾದ ಹಿಂದುಳಿದ ಜಿಲ್ಲೆಗಳಲ್ಲಿ ಸಚಿವರೇ ಇಲ್ಲ. ಬಹಳ ಸಮುದಾಯಗಳನ್ನು ಪ್ರತಿನಿಧಿಸುವವರೂ ಇಲ್ಲ ಎಂದರು.

Home add -Advt

ಕೆಲವು ಶಾಸಕರು, ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದು, ಒಬ್ಬರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ ಕೇಸು ದಾಖಲಿಸುತ್ತಾರೆ. ಈಗ ಅನೇಕ ಕಡೆ ಕಾಂಗ್ರೆಸ್‌ ಕಾರ್ಯಕರ್ತರೇ ಕೈಗೇ ಏನೇನೂ ತೆಗೆದುಕೊಂಡು ಸಿಎಂ ಭಾವಚಿತ್ರಕ್ಕೆ ಹೊಡೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಚಿವ ಸಂಪುಟದಲ್ಲಿ ಹೊಸತನವಿಲ್ಲ. ಅದೇ ಮುಖಗಳು, ಭ್ರಷ್ಟಾಚಾರಿಗಳನ್ನು ಮರಳಿ ಸಂಪುಟಕ್ಕೆ ತರಲಾಗಿದೆ. ಇದು ಸಿಎಂ ಡಿ.ಕೆ.ಶಿವಕುಮಾರ್‌ ಅವರ ಪಟ್ಟಿಯಲ್ಲ, ಪೇಮೆಂಟ್‌ ಲಿಸ್ಟ್‌ ಎಂದು ತಿಳಿದುಬಂದಿದೆ. ಏಕೆಂದರೆ ದಿಢೀರನೆ ಮಂಕಾಳು ವೈದ್ಯ ಅವರ ಹೆಸರು ತೆಗೆದುಹಾಕಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರ ಹೆಸರು ಸೇರಿಸಲಾಗಿದೆ. ಇದು ಕಾಂಚಾಣದ ಮಹಿಮೆ ಎಂದರು.

ಮಹಿಳೆಯರಿಗೆ ಮಾಡಿದ ದ್ರೋಹ

ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನ ನೀಡಿಲ್ಲ. ಚುನಾವಣೆಗೆ ಮುನ್ನ ಮಹಿಳೆಯರ ಸಬಲೀಕರಣದ ಬಗ್ಗೆ ಉದ್ದುದ ಮಾತನಾಡಿದ್ದ ಕಾಂಗ್ರೆಸ್‌ ಹೈಕಮಾಂಡ್ ಈಗ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. 12% ಇರುವ ಮುಸ್ಲಿಮರಿಗೆ 3 ಸ್ಥಾನ ನೀಡಲಾಗಿದೆ. 50% ಇರುವ ಮಹಿಳೆಯರಿಗೆ ಶೂನ್ಯ ಸ್ಥಾನ ನೀಡಲಾಗಿದೆ. ಗಾಯತ್ರಿ ಶಾಂತಗೌಡರು ಪ್ರೆಸ್‌ಮೀಟ್‌ ಮಾಡಿ ಮಾತಾಡಿದ್ದರು. ಕೊನೆಗೆ ಅವರಿಗೆ ಖಾತೆಯೇ ಇಲ್ಲವಾಯಿತು. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ದ್ರೋಹ. ಈ ಇದುವರೆಗೆ ಟೆಕಾಫ್ ಆಗಿಲ್ಲ, ಇನ್ನು ಮುಂದೆಯೂ ಆಗಲ್ಲ ಎಂದರು.

ಸಂವಿಧಾನದ ಪುಸ್ತಕ

ಕಾಂಗ್ರೆಸ್‌ ನಾಯಕರು ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡಿರುತ್ತಾರೆ. ಅದೇ ಕಾಂಗ್ರೆಸ್‌ ತನ್ನ ಲೆಟರ್ ಹೆಡ್ ನಲ್ಲಿ ಸ್ಪೀಕರ್‌, ಡೆಪ್ಯುಟಿ ಸ್ಪೀಕರ್, ಪರಿಷತ್ತಿನ ಛೇರ್ಮನ್, ವೈಸ್ ಛೇರ್ಮನ್ ಹೆಸರನ್ನು ಉಲ್ಲೇಖ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದೆ. ಇಡೀ ವಿಧಾನಸಭೆಯನ್ನು ಕಾಂಗ್ರೆಸ್‌ ಮನೆ ಮಾಡಲಾಗಿದೆ. ನೌಕರರನ್ನು ನೇಮಕ ಮಾಡುವ ಪಟ್ಟಿಯಂತೆ ಪರಿಗಣಿಸಿದ್ದಾರೆ. ಇದಕ್ಕಾಗಿ ಕಾಂಗ್ರೆಸ್‌ ಜನರ ಕ್ಷಮೆ ಯಾಚಿಸಬೇಕು. ಮುಖ್ಯಮಂತ್ರಿಯ ಪರಮಾಧಿಕಾರವನ್ನೇ ಕಿತ್ತುಕೊಂಡಿರುವುದರಿಂದ ಅವರು ರಬ್ಬರ್‌ ಸ್ಟಾಂಪ್‌ ಸಿಎಂ ಆಗಿದ್ದಾರೆ ಎಂದು ಟೀಕಿಸಿದರು.

ಕಾವೇರಿ ನೀರು ಹಂಚಿಕೆ

ಕಾವೇರಿ ನೀರು ಹಂಚಿಕೆಗಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದರಿಂದಾಗಿ ನಮಗೆ ಗಂಡಾಂತರ ಕಾದಿದೆ ಎಂಬುದು ಸ್ಪಷ್ಟವಾಗಿದೆ. ಸಿಎಂ ಜೋಸೆಫ್‌ ವಿಜಯ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ನೀರು ಹರಿಸಿದರೆ ಜನರು ಸುಮ್ಮನಿರುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಸೋತರೆ ರಾಜ್ಯದ ಕಾಂಗ್ರೆಸ್‌ ಟಿವಿಕೆಗೆ ಶರಣಾಗಿದೆ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸಿಎಂ ವಿಜಯ್‌ ಜತೆ ಸಭೆ ನಡೆಸಲು ಲಕ್ಷಾಂತರ ಖರ್ಚು ಮಾಡಿ ಸಮ್ಮೇಳನ ಸಭಾಂಗಣವನ್ನು ನವೀಕರಣ ಮಾಡಲಾಗುತ್ತಿದೆ. ಬರಗಾಲವಿದ್ದಾಗ ಇಂತಹ ವೆಚ್ಚ ಅಗತ್ಯವಿರಲಿಲ್ಲ ಎಂದರು.

ಶುಕ್ರವಾರ ಬೆಳಗ್ಗೆ ವಿಧಾನಸಭಾ ಅಧಿವೇಶನದ ಕುರಿತು ಸಭೆ ನಡೆಸಲಾಗುತ್ತಿದೆ. ಯಾವ ರೀತಿ ಹೋರಾಟ ಮಾಡಬೇಕು, ಚರ್ಚೆ ಮಾಡಬೇಕೆಂದು ಚರ್ಚಿಸಲಾಗುವುದು ಎಂದರು.

No novelty in the cabinet; it has corrupt people and those who secured positions through payment quotas: Opposition Leader R. Ashoka’s criticism

Opposition Leader R. Ashoka criticized that the new cabinet is filled with corrupt people, and many have joined through payments. It is clear that the Chief Minister did not have the freedom to choose the ministers.

Speaking at a press conference, he said a cabinet formation never before seen in the state has taken place. It is certain that ₹187 crore of the Scheduled Castes was looted and used in the elections. Former CM Siddaramaiah had admitted this in the Legislative Assembly. Even though B. Nagendra went to jail in this case, he has now rejoined the cabinet. Who gave him a clean chit? he questioned.

If the old CM was removed, the new CM has washed them with a washing machine and brought them back. Representation has not been given to the coastal-Malnad region. They have already admitted that “we would have lost there anyway,” he said sarcastically.

There are no ministers at all from backward districts such as Yadgir, Raichur, Vijayanagara, Kolar and Chikkaballapur. Many communities are also not represented, he said.

Some MLAs and their supporters are protesting, and one is preparing to resign.

When BJP workers protest, cases are registered. Now in many places Congress workers themselves have taken whatever they could lay their hands on and beaten the CM’s portrait. They have abused him with unparliamentary words. There is no novelty in the cabinet. The same faces and the same corrupt people have been brought back into the cabinet. This is not CM D.K. Shivakumar’s list, but a payment list, it has become clear. Because suddenly Mankalu Vaidya’s name was removed and S.S. Mallikarjun’s name was included. This is the magic of money, he said.

Betrayal of women

Not even one woman has been given a place in the cabinet. The Congress high command, which spoke at length about women’s empowerment before the elections, has now not given opportunity to even a single woman. Muslims, who are 12%, have been given 3 seats. Women, who are 50%, have been given zero seats. Gayatri Shantagoudar had held a press meet and spoken. In the end she got no portfolio at all. This is a betrayal of the women of the state. It has not taken off so far and will not take off in future either, he said.

Constitution book

Congress leaders keep holding the Constitution book. The same Congress has thrown the ideals of the Constitution to the winds by mentioning the names of the Speaker, Deputy Speaker, Chairman of the Council and Vice-Chairman on its letterhead. The entire Legislative Assembly has been turned into a Congress house. They have treated it like a list for appointing employees. For this, Congress should seek the people’s forgiveness. Since the Chief Minister’s supreme authority itself has been snatched away, he has become a rubber-stamp CM, he criticized.

Cauvery water sharing

The Tamil Nadu government has filed a petition in the Supreme Court regarding Cauvery water sharing. Because of this, it is clear that danger is waiting for us. If the CM reaches an understanding with Joseph Vijay and releases water, the people will not remain silent. If they lose in the Supreme Court, it will have to be understood that the state Congress has surrendered to TVK. Lakhs are being spent to renovate the convention hall for holding a meeting with CM Vijay. Such expenditure was not necessary when there is drought, he said.

A meeting will be held on Friday morning regarding the Assembly session. How the struggle should be carried out and what discussions should take place will be discussed, he said.

Related Articles

Back to top button