Kannada NewsKarnataka NewsLatest

ಬಿಜೆಪಿ ಅರ್ಥಶಾಸ್ತ್ರ ಪ್ರಕೋಷ್ಠದಲ್ಲಿ ಬೆಳಗಾವಿಯ ಪ್ರಾಧ್ಯಾಪಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಪ್ರಾಧ್ಯಾಪಕ ಡಾಕ್ಟರ್ ಸಂದೀಪ್ ನಾಯರ್ ಅವರನ್ನು ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿ ಅರ್ಥಶಾಸ್ತ್ರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಪ್ರಸ್ತುತ ಕೆ.ಎಲ್.ಎಸ್ ಸಂಸ್ಥೆಯ ಜಿ.ಐ.ಟಿ ಎಂಬಿಎ ಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಂದೀಪ್ ನಾಯರ್,  ಎಂಎ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ವರ್ಣಪದಕ ಪಡೆದವರಾಗಿದ್ದು ಕಳೆದ 25 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಸರ್ಕಾರದಿಂದ ಗುರುತಿಸಲ್ಪಟ್ಟ ಶಿಕ್ಷಕರ ತರಬೇತುದಾರರಾಗಿದ್ದಾರೆ. ಜೊತೆಗೆ ಅರ್ಥಶಾಸ್ತ್ರಜ್ಞರು ಕೊಡ.
ಹಲವಾರು ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರನ್ನು ಇದೀಗ ಭಾಜಪ ಅರ್ಥಶಾಸ್ತ್ರ ಪ್ರಕೋಷ್ಠದ ರಾಜ್ಯ ಕಾರ್ಯಕಾರಿ  ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Related Articles

Back to top button