Kannada NewsKarnataka NewsLatest

ಉದ್ಧವ್ ಉದ್ಧಟತನಕ್ಕೆ ತಡೆಯಾಜ್ಞೆ ತನ್ನಿ

ಗಡಿ ವಿವಾದವು ದಿವಾಣಿ  ನ್ಯಾಯಾಲಯದ ವ್ಯಾಪ್ತಿಗೊಳಪಡುವುದಿಲ್ಲ

ಪ್ರಗತಿವಾಹಿನಿ ಸುದ್ದಿ, ನವದೆಹಲಿ : ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ಪ್ರಕರಣದ ವಿಚಾರಣೆ  ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ.
ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದ ಕುರಿತು  2004 ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರಿಂ ಕೋರ್ಟ್‌ನಲ್ಲಿ ಅತೀ ಹೆಚ್ಚು ಮರಾಠಿ ಮಾತನಾಡುವ ಪ್ರದೇಶಗಳಾದ  ಬೆಳಗಾವಿ ಹಾಗೂ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ವಿಲೀನೀಕರಣಗೋಳಿಸಿಕೊಳ್ಳಬೇಕೆಂದು ದಿವಾಣಿ ಪ್ರಕರಣವೊಂದನ್ನು  ದಾಖಲಿಸಿದೆ.
ಆದರೆ ರಾಜ್ಯ ಪುನರ್ ವಿಂಗಡಣಾ ಕಾಯ್ದೆ 1956 ಕಲಂ 7(1) (b) & (c)ಮತ್ತು 8(1)(a)(1)ಗಳನ್ನು ರದ್ದುಪಡಿಸಿ, ಹೆಚ್ಚಿನ ಸಂಖ್ಯೆಯ  ಮರಾಠಿ ಭಾಷಿಕರನ್ನು ಹೊಂದಿರುವ  ಬೆಳಗಾವಿ ಜಿಲ್ಲೆ ಸೇರಿದಂತೆ ಗಡಿ ಭಾಗದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ವಾದವನ್ನು ಮುಂದಿಟ್ಟುಕೊಂಡು ಸುಪ್ರಿಂಕೋರ್ಟ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.  ಆದರೆ ಗಡಿ ವಿವಾದವು ದಿವಾಣಿ  ನ್ಯಾಯಾಲಯದ ವ್ಯಾಪ್ತಿಗೊಳಪಡುವುದಿಲ್ಲ. ಬದಲಾಗಿ ಸಂಸತ್ತಿನಲ್ಲಿ  ಚರ್ಚೆ ಮಾಡಿ ಕೇಂದ್ರೀಯ ಅದಿನಿಯಮವಾದ ರಾಜ್ಯ ಪುನರವಿಂಗಡಣೆ ಕಾಯ್ದೆಯ ಕಲಂಗೆ ತಿದ್ದುಪಡಿಮಾಡುವ  ಅಥವಾ ಕಲಂ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂಬುದಾಗಿ ಸುದೀರ್ಘ ಚರ್ಚೆಯನ್ನು ಗಡಿ ಚಿಂತಕ ಡಾ. ರವೀಂದ್ರ ತೋಟಿಗೇರ ಅವರು ದೆಹಲಿಯ  ಸುಪ್ರೀಂ ಕೋರ್ಟನಲ್ಲಿ  ಕರ್ನಾಟಕ ರಾಜ್ಯ ಸ್ಟ್ಯಾಂಡಿಂಗ್ ಕೌನ್ಸಿಲ್ ವಿ. ಏನ್. ರಘುಪತಿಯವರ ಜೊತೆ ಮಾಡಿದರು.
 ಗಡಿ ವಿಷಯಲ್ಲಿ ಮಹಾರಾಷ್ಟ್ರ ಸರ್ಕಾರ ದ್ವಂಧ್ವ ನಿಲುವು ತಾಳಿದ್ದಲ್ಲದೇ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಿ ಕೈ ಕಟ್ಟಿಸಿಕೊಂಡಿದೆ. ಏಕೆಂದರೆ 1988 ರಲ್ಲಿ ಖಾನಾಪೂರ ದಿವಾಣಿ ನ್ಯಾಯಾಲಯದಲ್ಲಿ  ದಾಖಲಿಸಿದ ಗಡಿ ದಾವೆಯ ವಿಚಾರಣೆ ನಡೆಸಿದ ಖಾನಾಪುರದ ದಿವಾಣಿ ನ್ಯಾಯಾಲಯ ಗಡಿ ಪ್ರಕರಣ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ, ಕೇಂದ್ರೀಯ ಕಾಯ್ದೆ ಕಲಂಗಳು ಸಂವಿಧಾನಿಕ ಹಕ್ಕನ್ನು ಪಡೆದುಕೊಂಡು ಬಂದಿರುವುದರಿಂದ  ರಾಜ್ಯ ಪುನರ್ ವಿಂಗಡಣಾ ಕಾಯ್ದೆ 1956 ಕಲಂ 7 ಮತ್ತು 8ನ್ನು ರದ್ದುಪಡಿಸುವ ಅಧಿಕಾರ ದಿವಾಣಿ ನ್ಯಾಯಾಲಯದ ವ್ಯಾಪ್ತಿಗಿಲ್ಲ,  ಎಂದು ತಿಳಿಸಿ,  ಈ ದಾವೆಯನ್ನು ತೀರಸ್ಕೃರಿಸಿದ್ದರಿಂದ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು, ಜಿಲ್ಲಾ ನಾಯ್ಯಾಲಯವೂ ವಿಚಾರಣೆ ನಡೆಸಿ, ಮತ್ತೆ ಕೆಳ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಮರುವಿಚಾರಣೆ ನಡೆಸುವಂತೆಯೂ ಆದೇಶಿಸಿತ್ತು. ಇದೆ ಪ್ರಕರಣದಲ್ಲಿ  ಮಹಾರಾಷ್ಟ್ರ ಸರ್ಕಾರ 07/11/1988 ರಂದು ಕೈಫಿಯತ ಸಲ್ಲಿಸಿತ್ತು.
ಕೈಫಿಯತ್ತಿಗೆ  ಕೊಲ್ಹಾಪುರ ಡಿಸ್ಟಿಕ್ಟ್ ಗರ್ವನಮೆಂಟ್ ಪಿಡ್ಲರ್ ಎಸ್.ಜಿ.ನಾಯಿಕ ಎಂಬುವರು ಸಹಿಮಾಡಿದ್ದರು. ಕೈಫಿಯತ್ತನಲ್ಲಿ  ಗಡಿ ವಿಚಾರವು ದಿವಾಣಿ  ನ್ಯಾಯಾಲಯದ ವ್ಯಾಪ್ತಿಗಿಲ್ಲ  ಹಾಗೂ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯ ಕಲಂನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಗಡಿ ವಿಚಾರ ಸಂಸತ್ತಿನಲ್ಲಿ ಚರ್ಚೆ ಮಾಡುವ ಮೂಲಕ ಅದಿನಿಯಮಕ್ಕೆ ತಿದ್ದುಪಡಿಮಾಡಬೇಕಾಗುತ್ತದೆ ಹಾಗೂ ಈ ಮೂಲಕವೇ  ಇತ್ಯರ್ಥಪಡಿಸಬೇಕಾಗುತ್ತದೆ  ಎಂದು ಕೈಫಿಯತನಲ್ಲಿ  ಸ್ಪಷ್ಟವಾಗಿ ನಮೂದಿಸಿದ್ದಾರೆ. ಒಂದು ಕಡೆ ಮಾಹಾರಾಷ್ಟ್ರ ಸರ್ಕಾರದ ಪಿಡ್ಲರ್ ಸಿದ್ದಪಡಿಸಿದ ಕೈಫಿಯತ್ತನಲ್ಲಿ ನ್ಯಾಯಾಲಯಕ್ಕೆ ವ್ಯಾಪ್ತಿ ಇಲ್ಲ ಎಂಬ ಅಂಶವನ್ನು ನಮೂದಿಸಲಾಗಿದ್ದರೂ, ಗಡಿ ವಿಚಾರ ಕುರಿತು  2004 ರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ,  ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳನ್ನು ಪ್ರತಿವಾದಿಯನ್ನಾಗಿಸಿಕೊಂಡು ಸುಪ್ರಿಂ ಕೋರ್ಟಿನ ಮೋರೆ ಹೋಗಿರುವುದು ಎಷ್ಟರ ಮಟ್ಟಿಗೆ ಸರಿ.
1988ರಲ್ಲಿ ಖಾನಾಪೂರ ದಿವಾಣಿ ನ್ಯಾಯಾಲಯ ಸ್ಪಷ್ಟವಾಗಿ ನಿರ್ಧಾರ ಕೈಗೊಂಡಿದ್ದರೂ, ಮಹಾರಾಷ್ಟ್ರ ಸರ್ಕಾರವು ಎಸ್ ಜಿ ನಾಯ್ಕರ ಮೂಲಕ ಸಲ್ಲಿಸಿರುವ ಕೈಫಿಯತನಲ್ಲಿ ಗಡಿ ಪ್ರಕರಣ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೂ 2004 ರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ  ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ.
ಈಗಾಗಲೇ 1988ರಲ್ಲಿ ದಿವಾಣಿ ನ್ಯಾಯಲಯದ ತೀರ್ಪು ಸೇರಿದಂತೆ ಒಟ್ಟು ೪೦೦ ಪುಟಗಳ ಮಹತ್ವದ ದಾಖಲೆಗಳನ್ನು ಈಗಾಗಲೇ ಕೇಂದ್ರ ಸಂಸದೀಯ, ಕಾನೂನು ಮತ್ತು ಪ್ರಧಾನ ಮಂತ್ರಿ ಮಂತ್ರಾಯಲಕ್ಕೆ ಸಲ್ಲಿಸಲಾಗಿದೆ. ಹಾಗೆಯೇ ಕರ್ನಾಟಕ ರಾಜ್ಯ ಸರ್ಕಾರಕ್ಕೂ ಕೂಡಾ ನೀಡಲಾಗಿದೆ.  ಈ ಕುರಿತು ಪ್ರತಿಕ್ರಿಯಿಸಿರುವ ಮೂರು ಮಂತ್ರಾಲಯಗಳು ಗಡಿ ಪ್ರಕರಣವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ,  ಗೃಹ ಸಚಿವರ ಮಂತ್ರಾಯಲಕ್ಕೆ ಬರುತ್ತವೆ ಎಂದು ಪತ್ರ ನೀಡಿವೆ. ಈ ದಾಖಲೆಗಳನ್ನು ಇಟ್ಟುಕೊಂಡು ಮಹಾರಾಷ್ಟ್ರ ದಾಖಲಿಸಿರುವ ಪ್ರರಣವನ್ನು ವಜಾಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿರಿಯ ವಕೀಲ ಹಾಗೂ ಗಡಿತಜ್ಞರಾದ ಡಾ. ರವೀಂದ್ರ ತೋಟಿಗೇರ ಕರ್ನಾಟಕ ರಾಜ್ಯ ಸರ್ಕಾರ ಸ್ಟ್ಯಾಂಡಿಂಗ್ ಕೌನ್ಸಿಲ್ ವಿ. ಏನ್. ರಘುಪತಿ ಅವರನ್ನು ಒತ್ತಾಯಿಸಿದ್ದಾರೆ.
ಹಾಗೆಯೇ ದಾವೆ ದಾಖಲಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ,  ಇನ್ನಿತರ ಸಚಿವರು ಹಾಗೂ ಯಾರೇ ಆಗಲಿ ಕನ್ನಡ, ಕನ್ನಡಿಗ,  ಕರ್ನಾಟಕದ ವಿರುದ್ಧ ಯಾವುದೇ ಹೇಳಿಕೆ ನೀಡುವುದನ್ನು ನಿರ್ಬಂಧಿಸುವ ತಡೆ ಆಜ್ಞೆ ಪಡೆದುಕೊಳ್ಳಲು ಮಧ್ಯಂತರ ಅರ್ಜಿ ದಾಖಲಿಸಲು   ತೋಟಿಗೇರ ಅವರು ರಘುಪತಿಯವರನ್ನು ಒತ್ತಾಯ ಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button