Latest

ಹಬ್ಬ ಹರಿದಿನಗಳಲ್ಲಿ ‘ಶಿವರಾತ್ರಿಯೇ ಸರ್ವಶ್ರೇಷ್ಠ’

ಮಹಾಶಿವರಾತ್ರಿ

ಭಾರತೀಯರು ಆಚರಿಸುವ ಎಲ್ಲ ಹಬ್ಬ ಹರಿದಿನಗಳಲ್ಲಿ ‘ಶಿವರಾತ್ರಿಯೇ ಸರ್ವಶ್ರೇಷ್ಠ’.  ಶಿವರಾತ್ರಿಯಂದು ಪತಿತಪಾವನನೂ ಜ್ಞಾನೇಶ್ವರನೂ ಆದ ‘ಸದಾಶಿವನು ಬಂದು’ ಭಕ್ತರ ತಾಪವನ್ನು ತೊಲಗಿಸಿ, ಪಾಪವನ್ನು ಹರಿಸಿ, ಕೇಡು, ದುಃಖ, ಭಯ, ರೋಗ, ಭೂತ, ಪಿಶಾಚಿಗಳ ಕಾಟ, ಅಪಮೃತ್ಯು, ಅಶಾಂತಿಯ ಪರದಾಟವನ್ನು ಪರಿಹರಿಸಿ, ಭಯಾನಕ ರಾಕ್ಷಸೀಯ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದಿ ಮಾಯಾ ಪಂಜರದಿಂದ ಬಿಡಿಸಿ ಆಯುರಾರೋಗ್ಯ ಅಷ್ಟೈಶ್ವರ್ಯಗಳನ್ನು ಸದಾಕಾಲಕ್ಕಾಗಿ, ಶಾಶ್ವತವಾಗಿ ದೈವಿ ಜನ್ಮಸಿದ್ಧ ಅಧಿಕಾರಗಳನ್ನು ದಯಾಪಾಲಿಸುತ್ತಾನೆಂದು ಭಾರತೀಯರ ನಂಬಿಕೆ ಇದೆ.

ಪ್ರತಿದಿನ ಸೂರ್ಯನಿಲ್ಲದ ಸಮಯಕ್ಕೆ ರಾತ್ರಿ ಎನ್ನಲಾಗುತ್ತದೆ. ಆದರೆ ಶಿವರಾತ್ರಿಯ ರಾತ್ರಿಯೇ ಬೇರೆ. ಸೂರ್ಯಸ್ತವಾದ ನಂತರದ ಕತ್ತಲಿನ ರಾತ್ರಿ ಇದಾಗಿರದೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಸೂರ್ಯನ ಬೆಳಕಿನಲ್ಲಿ ಅeನವೆಂಬ ಕತ್ತಲು ಕವಿದಿರುವ ರಾತ್ರಿ ಇದಾಗಿರುತ್ತದೆ. ಅeನಾಂಧಕಾರ ಅವರಿಸಿರುವ ರಾತ್ರಿ ಇದಾಗಿರುತ್ತದೆ. ಯಾವಾಗ ಎಲ್ಲ ಮಾನವರೂ ಅಧರ್ಮ, ಅನ್ಯಾಯ, ಅನೀತಿ, ಅನೈತಿಕತೆ, ಅರಾಜಕತ್ವ, ಅಶಾಂತಿ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದಲ್ಲಿ ಮುಳುಗಿ, ಧರ್ಮಭ್ರಷ್ಟ, ಕರ್ಮಭ್ರಷ್ಟರಾಗಿ ಅeನವೆಂಬ ಅಂಧಕಾರದಲ್ಲಿ ತೇಲುತ್ತಿರುವರೋ, ಕಣ್ಣಿದ್ದೂ ಕಣ್ಣು ಕಾಣದ ಕುರುಡರಂತೆ ನಡೆಯುತ್ತಿರುವರೋ, ಅಂತಹ ರಾತ್ರಿಯೇ ಕಾಳರಾತ್ರಿ. ಎಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ತುಂಬಿತುಳುಕುತ್ತಿವೆಯೋ, ಎಲ್ಲಿ ಅಧಿಕಾರ ಲಾಲಸೆ, ಕಾಳಸಂತೆ, ಲಂಚ, ವಂಚನೆ, ಜಾತೀಯತೆ, ಪ್ರಾಂತೀಯತೆ, ಭಾಷಾಗೊಂದಲ, ಸುಳ್ಳುಗ್ರಂಥಗಳ ಮಾರ್ಗದರ್ಶನ, ಆಂಧವಿಶ್ವಾಸ ಮುಂತಾದವುಗಳಲ್ಲಿ ಮನುಷ್ಯಾತ್ಮರು ಸಿಕ್ಕಿ ಹಾಕಿಕೊಂಡು ತಲ್ಲಣಿಸುತ್ತ ದಾರಿಕಾಣದೆ ತಡಕಾಡುತ್ತಿರುವರೋ, ಅದೇ ಘೋರ ರಾತ್ರಿ. ಯಾವಾಗ “ಹೇ ಪರಮಪಿತ ಪರಮಾತ್ಮನೇ ಈ ಎಲ್ಲ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡು ತಂದೇ” ಎಂದು ಜನ ಸಾಮಾನ್ಯರು, ಸಾಧು ಸಜ್ಜನರು ಭಗವಂತನಿಗೆ ಮೊರೆ ಇಡುತ್ತಿರುವರೋ, ಅದೇ ಘೋರರಾತ್ರಿಯಲ್ಲಿ ಶಿವ ಪರಮಾತ್ಮನ ಅವತರಣೆ ಆಗುತ್ತದೆ.

ಭಾರತದ ಹಾಗೂ ವಿಶ್ವದಾದ್ಯಂತ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ಪೂರ್ವದಲ್ಲಿ ಕಾಶಿಯಲ್ಲಿ ವಿಶ್ವನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಪಶ್ಚಿಮದಲ್ಲಿ ಸೋಮನಾಥ, ಉಜೈನಲ್ಲಿ ಮಹಾಕಾಳೆಶ್ವರ, ಹಿಮಾಲಯದಲ್ಲಿ ಕೇದಾರನಾಥ, ಹಿಸಾರದಲ್ಲಿ ವೈದ್ಯನಾಥ, ಮಧ್ಯಪ್ರದೇಶದಲ್ಲಿ ಓಂಕಾರನಾಥ, ದ್ವಾರಕಾದಲ್ಲಿ ಭುವನೆಶ್ವರ ಮುಂತಾದವು ಕೇವಲ ಬಾರತದಲ್ಲಿ ಮಾತ್ರವಲ್ಲದೆ ಹೊರರಾಷ್ಟ್ರಗಳ ಸಂಸ್ಕೃತಿಗಳಲ್ಲಿಯೂ ಸಹ ಶಿವನನ್ನು ಕಾಣಬಹುದು. ಉದಾಹರಣೆಗೆ ಸೇಪಾಳದಲ್ಲಿ ಪಶುಪತಿನಾಥ, ಬೆಬಿಲೋನನಲ್ಲಿ ಶಿವನಿಗೆ ‘ಶಿವೂನ’ ಎಂದು ಹೇಳಲಾಗುತ್ತದೆ. ಮಿಶ್ರದಲ್ಲಿ ‘ಸೇವಾ’ ನಾಮದಿಂದ ಪೂಜೆಯು ನಡೆಯುತ್ತದೆ. ರೊಮದಲ್ಲಿ ‘ಪ್ರಿಯಪ್ಸ್’ ಎಂದು ಹೇಳಲಾಗುತ್ತದೆ. ಇಟಲಿಯ ಚರ್ಚಗಳಲ್ಲಿ ಇಂದಿಗೂ ಶಿವನ ಪ್ರತಮೆಗಳನ್ನು ಕಾಣಬಹುದು. ಚೀನಾದಲ್ಲಿ ಶಿವಲಿಂಗಕ್ಕೆ ‘ಹೂವೆಡ್ ಹಿಪೂಹ’ ಎಂದು ಕರೆಯಲಾಗುತ್ತದೆ. ಯುನಾನದಲ್ಲಿ ‘ಫಲ್ಲೂಸ’, ಅಮೇರಿಕಾದ ಪುರುವಿಯಾ ಎಂಬ ಸ್ಥಳದಲ್ಲಿ ಈಶ್ವರನಿಗೆ ‘ಶಿವೂ’ ಎಂದು ಹೇಳುತ್ತಾರೆ. ಕಾಬಾದಲ್ಲಿ ಶಿವನ ಪ್ರತಿಮೆ ಇತ್ತು ಆದರಿಂದಲೆ ಸಂಶೋಧಕರು ‘ಕಾಬಾ’ನುಸಹ ಶಿವಾಲಯ ಇತ್ತು ಎಂದು ನಂಬುತ್ತಾರೆ. ಇದರಿಂದಲೆ ಶಿವಪರಮಾತ್ಮನು ಅವತರಿಸಿ ವಿಶ್ವ ಪರಿವರ್ತ್‌ನೆಯ ಕಲ್ಯಾಣಕಾರಿ ಕರ್ತವ್ಯ ಮಾಡಿದ್ದಾನೆ ಎಂದು ಸ್ಪಷ್ಟವಾಗುತ್ತದೆ.

ಶಿವನ ಸತ್ಯ ಸಂದೇಶವನ್ನು ಸಾರುವ ಬೃಹತ ಲಿಂಗಾಕಾರದ ಶಿವಾಲಯಗಳನ್ನು ಈಶ್ವರೀಯ ವಿಶ್ವವಿದ್ಯಾಲಯದಿಂದ, ಗುಜರಾತಿನ ಸೋಮನಾಥದಲ್ಲಿ, ಬೆಂಗಳೂರಿನ ಗೊಟ್ಟಿಗೆರೆಯಲ್ಲಿ, ದಾವಣಗೆರೆಯ ದೇವರಾಜ ಅರಸು ಬಡಾವಣೆಯಲ್ಲಿ, ಯಲ್ಲಾಪೂರದ ತಪೋವನದಲ್ಲಿ, ಹಾವೇರಿ, ಹೊಸಪೇಟೆ, ಹಾಗೂ ಗೋಕರ್ಣದಲ್ಲಿಯೂ ಸಹ ನಿರ್ಮಿಸಲಾಗಿದೆ.

Home add -Advt

ದಾವಣಗೆರೆಯಲ್ಲಿ ಇರುವ ಬೃಹದಾಕಾರದ ೫೨ ಅಡಿ ಎತ್ತರದ ಶ್ವೇತ ವರ್ಣದಿಂದ ಕಂಗೊಳಿಸುತ್ತಿರುವ ಶಿವಲಿಂಗವು ಪ್ರತಿಯೊಬ್ಬರಿಗೂ ಕೈಬೀಸಿ ಕರೆಯುತ್ತಿದೆ. ಇದರ ಸುತ್ತಳತೆಯು ೫೦ ಅಡಿಗಳು. ಎದುರುಗಡೆ ಶಿವನ ಧ್ಯಾನದಲ್ಲಿ ಮಗ್ನರಾಗಿರುವ ೧೮ ಅಡಿ ಎತ್ತರದ ಬಸವಣ್ಣನ ಸುಂದರ ಮೂರ್ತಿ ಇದೆ. ಈ ಶಿವಮಂದಿರದ ನಿರ್ಮಾಣಕಾರ್ಯವು ೧೯೯೧ ರಲ್ಲಿ ಆರಂಭವಾಗಿ ೧೯೯೯, ಜನವರಿ ೨೭ ರಂದು ಸಂಸ್ಥೆಯ ಪ್ರಧಾನ ಆಡಳಿತಾಧಿಕಾರಿಣಿ ದಾದಿ ಪ್ರಕಾಶಮಣಿಯವರಿಂದ ಉದ್ಗಾಟನೆಗೊಂಡಿತು. ಒಳಗಡೆ ನೀರಾಕಾರ ಪರಮಾತ್ಮ ಶಿವನ ಸತ್ಯ eನವನ್ನು ತಿಳಿಸುವ ಎಳು ಮಂಟಪಗಳ ಆಧ್ಯಾತ್ಮಿಕ ಸಂಗ್ರಹಾಲಯವಿದೆ. ಮೊದಲನೆಯ ಮಂಟಪ ಆತ್ಮದರ್ಶನ ಎಂದರೆ ಸ್ವಪರಿಚಯ. ನಾನು ಈ ಶರೀರರೂಪಿ ಪಂಚ ಕರ್ಮೇಂದ್ರಿಯಗಳ ರಾಜ, ಪಂಚ ತತ್ವಗಳ ಕುದರೆಯ ಸಾರಥಿ ನಾನು ಆತ್ಮ, ಚೈತನ್ಯ ಶಕ್ತಿ. ಎಂದು ತೋರಿಸಲಾಗಿದೆ. ಎರಡನೆಯ ಮಂಟಪದಲ್ಲಿ ಭಾರತದ ಉತ್ಥಾನ ಮತ್ತು ಪತನದ ಬಗ್ಗೆ ಮಾದರಿ ಇದೆ. ಸೃಷ್ಟಿ ಚಕ್ರದ ಗೋಳದಲ್ಲಿ ೪ ಯುಗಗಳಾದ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳನ್ನು ತೋರಿಸಲಾಗಿದೆ, ಅದು ತಿರುಗುತ್ತ ತಿರುಗುತ್ತ ಮತ್ತೆ ಸತ್ಯಯುಗ ಬರುತ್ತದೆ. ಅಂದರೆ ಕಾಲಚಕ್ರವು ಪುನರಾವರ್ತಿಸುತ್ತದೆ. ಈಗ ಕಲಿಯುಗದ ಅಂತಿಮ ಸುಮಯವಾಗಿದೆ ಮತ್ತೆ ಸತ್ಯಯುಗ ಬಂದೇ ಬರುತ್ತದೆ. ಮೂರನೆ ಮಂಟಪದಲ್ಲಿ ಭಾರತೀಯರ ಭಕ್ತಿಯ ಪರಂಪರೆಯ ಬಗ್ಗೆ ಇದೆ. ಇದರಲ್ಲಿ ಪೂಜಾರಿಗಳ ಪೂಜಾರಿ ನಾವು ಹೇಗೆ ಆಗಿದ್ದೇವೆ ಎಂದು ಸುಂದರವಾಗಿ ತೋರಿಸಲಾಗಿದೆ. ಶಿವನನ್ನು ಗಣಪತಿ, ಗಣಪತಿಗೆ ಅವನ ಭಕ್ತ, ಆ ಭಕ್ತನಿಗೆ ಅವನ ಭಕ್ತ ಪೂಜಿಸುತ್ತಿರುವುದು. ನಾಲ್ಕನೆ ಮಂಟಪದಲ್ಲಿ ಏಕದೇವೋಪಾಸನೆಯಿಂದ ವಿಶ್ವಏಕತೆ ಹೇಗೆ ಸಾಧ್ಯ ಎಂದು ತಿಳಿಸಿಕೊಡಲಾಗಿದೆ. ಸರ್ವ ಆತ್ಮರ ತಂದೆಯೊಬ್ಬ, ಅವನೇ ನಿರಾಕಾರ ಶಿವನು, ಅವನೇ ಅಲ್ಲಾ, ಅವನೆ ಈಶ, ಅವನೇ ಗಾಡ್, ಓಂಕಾರನು, ದೇವನೊಬ್ಬ, ನಾಮ ಹಲವು ಭಕ್ತರೆನಿತೊ ಜಗದೋಳು. ಭಾವ ಒಂದೇ, ಭಾಷೆ ಹಲವು, ನಮ್ಮಲೇಕೆ ಭೇದವೂ. ನಾನು ಹಿಂದು, ನಾನು ಮುಸಲ್ಮಾನ, ಕ್ರೈಸ್ತರೆಂಬ ಭೇದವೂ. ನಾಳೆ ನಾಡನಾಳುವಂತಾ ಮಕ್ಕಳಲ್ಲಿ ಜಗಳವೂ. ಬ್ರಹ್ಮ, ವಿಷ್ಣು, ಬಸವ, ಎಸು, ನಾನಕ ಪೈಗಂಬರೆಲ್ಲ ಒಬ್ಬದೇವನ ಮಕ್ಕಳು ಸರ್ವಧರ್ಮವನ್ನು ಬಿಟ್ಟು, ದೇಹ ಧರ್ಮವನ್ನು ಸುಟ್ಟು, ನಿರಾಕಾರ ಜೋರ್ತಿಬಿಂದು ತಂದೆ ಶಿವನ ನೆನೆಯುವಾ. ಎಂಬ ಭಾವನೆ ಮುಡಿಬರುತ್ತದೆ. ಐದನೆ ಮಂಟಪದಲ್ಲಿ ಪರಮಾತ್ಮ ಒಬ್ಬನೆ ಗೃಹಸ್ಥಿ ದೇವತೆಗಳು ಅನೇಕ ಎಂಬ ಬಗ್ಗೆ ದೃಷ್ಯಗಳು ಇವೆ. ಜೀವಾತ್ಮರು ಹಾಗೂ ನಿರಾಕಾರ ಶಿವ ಪರಮಾತ್ಮನಲ್ಲಿ ಇರುವ ವತ್ಯಾಸವನ್ನು ತೋರಿಸಲಾಗಿದೆ. ಆರನೆ ಮಂಟಪ ರಾಜಯೋಗದ ಶಿಕ್ಷಕ ಯಾರು ಎಂದು ಹೇಳುತ್ತದೆ. ರಾಜಯೋಗದ ಶಿಕ್ಷಣವನ್ನು ನಿರಾಕಾರನಾದ ಶಿವನು ಪ್ರಜಾಪಿತ ಬ್ರಹ್ಮನ ಮೂಲಕ ಸ್ಥಾಪನೆ ಮಾಡಿರುವ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಉಚಿತವಾಗಿ ಹೇಳಲಾಗುತ್ತದೆ. ರಾಜಯೋಗದ ವಿಧಿ ವಿಧಾನಗಳು ಮತ್ತು ಅದರಿಂದ ಸಿಗುವ ಪ್ರಾಪ್ತಿಯ ಬಗ್ಗೆ ಮಾಹಿತಿ ಸಿಗುತ್ತದೆ. ಏಳನೆ ಮಂಟಪದಲ್ಲಿ ಕರ್ಮದಂತೆ ಫಲದ ಬಗ್ಗೆ ತೋರಿಸಲಾಗಿದೆ. ಶ್ರೆಷ್ಥ ಕರ್ಮಗಳಿಗೆ ಶ್ರೇಷ್ಥ ಫಲವು ಸಿಗುತ್ತದೆ. ಈ ಎಲ್ಲಾ ಮಂಟಪಗಳ ವಿವರಣೆಯನ್ನು ದ್ವನಿಸುರುಳಿಯ ಮೂಲಕ ಕೇಳುವ ವ್ಯವಸ್ಥೆ ಮಾಡಲಾಗಿದೆ. ಎರಡನೆ ಅಂತಸ್ತಿದಲ್ಲಿ ಶಿವಧ್ಯಾನ ಮಂದಿರ ಹಾಗೂ ಆಧ್ಯಾತ್ಮಿಕ ತರಗತಿಗೆ ಸ್ಥಳವಿದೆ. ಸುಮಾರು ೩೦೦ ಜನರು ಆರಾಮವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇದೆ. ದಿನನಿತ್ಯ ಈ ಶಿವಮಂದಿರಕ್ಕೆ ೪೦೦ರಿಂದ ೫೦೦ ಆಸಕ್ತರು ಭೆಟ್ಟಿ ನೀಡಿ ಈಶ್ವರೀಯ eನ ಮತ್ತು ರಾಜಯೋಗದ ಶಿಕ್ಷಣದ ಬಗ್ಗೆ ತಿಳಿದುಕೊಳ್ಳುತ್ತಾರೆ.

ಶಿವರಾತ್ರಿಯಲ್ಲಿ ಉಪವಾಸದ ಅರ್ಥ ‘ಉಪ’ ಎಂದರೆ ‘ಸಮೀಪ’ ವಾಸ ಎಂದರೆ ‘ಇರುವುದು’. ವಾಸ್ತವಿಕವಾಗಿ ಬುದ್ದಿಯೋಗವನ್ನು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸುವುದೇ ಸತ್ಯ ಉಪವಾಸವಾಗಿದೆ. ಶಿವರಾತ್ರಿಯಂದು ಸಾಮಾನ್ಯವಾಗಿ ಭಕ್ತರು ದೇವರ ಚಿಂತನೆ ಮಾಡುತ್ತಾ ಸ್ಥೂಲ ಜಾಗರಣೆ ಮಾಡುತ್ತಾರೆ. ವಾಸ್ತವಿಕವಾಗಿ ಒಂದು ರಾತ್ರಿ ನಿದ್ರೆಕೆಟ್ಟು ಜಾಗರಣೆ ಮಾಡಿದರೆ ಸಾಲದು. ಈ ಅeನದ ಅಂಧಕಾರದ ರಾತ್ರಿಯಲ್ಲಿ ಸದಾಕಾಲ ಎಚ್ಚರವಾಗಿದ್ದು ಮಾಯೆಯ ರೂಪವಾದ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಮೇಲೆ ವಿಜಯಗಳಿಸಬೇಕೆಂಬುದು ಇದರ ಅರ್ಥವಾಗಿದೆ.

ಮಹಾಶಿವರಾತ್ರಿಯ ಈ ಶುಭಸಮಯದಲ್ಲಿ ಸತ್ಯ eನ ಮತ್ತು ರಾಜಯೋಗ ಕಲಿಯಲು, ಹತ್ತಿರದ ಆಧುನಿಕ ಶಿವಾಲಯಗಳಿಗೆ ಆಥವಾ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.

-ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,
೯೪೮೩೯೩೭೧೦೬

Related Articles

Back to top button