Latest

ಸಾರ್ವಜನಿಕರಿಗೆ ವಂಚನೆ; ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಾರ್ವಜನಿಕರಿಗೆ ವಂಚಿಸಿ ಹಣ ದೋಚುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಎ-1 ಮಹ್ಮದಬ್ಬಾಸ ಹುಸೇನ್ ಶೇಖ (ವ.55) ಮತ್ತು ಈತನ ಮಗನಾದ ಎ-2 ಮಹ್ಮದಶಾಹಿದ ಮಹ್ಮದಬ್ಬಾಸ ಶೇಖ (ವ.28) ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಇಬ್ಬರೂ ಆರೋಪಿಗಳು ಅಜಮನಗರ 4 ನೇ ಕ್ರಾಸ್ ನಿವಾಸಿಗಳಾಗಿದ್ದು, ಬೆಳಗಾವಿ ನಗರದ ಹಲವು ಕಡೆಗಳಲ್ಲಿ ಅಪಾರ್ಟಮೆಂಟ್ ಮತ್ತು ಕಾಂಪ್ಲೆಕ್ಸ್ ಗಳನ್ನು ಕಟ್ಟಿ ಮಾರಾಟ ಮಾಡುವುದಾಗಿ ಸಾರ್ವಜನಿಕರಿಗೆ ಹೇಳಿ,ಅವರಿಂದ ನಗದು ಹಣವನ್ನು ಪಡೆದುಕೊಂಡು ತಲೆಮರೆಸಿಕೊಂಡು ಓಡಾಡಿಕೊಂಡಿದ್ದರು.

ಮಾ.30 ರಂದು ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ನಂತರ ದಸ್ತಗೀರಿ ಮಾಡಿ,ವಿಚಾರಣೆ ನಡೆಸಲಾಗಿದೆ.
ಸದ್ಯ ಆರೋಪಿಗಳನ್ನು ಬೆಳಗಾವಿಯ 4 ನೇ ಜೆಮ್ಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ.

ಪೊಲೀಸ್ ಅಧೀಕ್ಷಕರಾದ ಡಾ.ಭೀಮಾಶಂಕರ ಗುಳೇದ, ಐಪಿಎಸ್ ಸಿಐಯು, ಸಿಐಡಿ ಬೆಂಗಳೂರು ಅವರ ಮಾರ್ಗದರ್ಶನದಂತೆ ಈ ಪ್ರಕರಣದ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್ ಶಿವಪ್ಪ ಕೆ. ಕುರಗೋಡಿ ಎನ್ ಡಿಸಿ, ಸಿಐಡಿ ಬೆಳಗಾವಿ ಘಟಕ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಮೊಕದ್ದಮೆಯು ಬಹುಕೋಟಿ ವಂಚನೆ ಪ್ರಕರಣವಾಗಿರುವುದರಿಂದ ಮುಂದಿನ ತನಿಖೆಗಾಗಿ ಸಿಐಡಿಗೆ ವರ್ಗಾವಣೆಯಾಗಿ ತನಿಖಾ ಹಂತದಲ್ಲಿದೆ.

ಆರೋಪಿತರ ಪತ್ತೆ ಹಾಗೂ ದಸ್ತಗೀರಿ ಕಾರ್ಯದಲ್ಲಿ ಸಿಐಡಿ, ಎನ್ ಡಿ ಸಿ ಬೆಳಗಾವಿ ಘಟಕದ ಸಿಬ್ಬಂದಿಗಳಾದ ಜಗದೀಶ ಬಾಗನವರ ಸಿಎಚ್ ಸಿ- 7702 , ಜಿ. ಆರ್. ಶಿರಸಂಗಿ ಸಿಎಚ್ ಸಿ- 1241, ಚಿದಂಬರ ಚಟ್ಟರಕಿ ಸಿಪಿಸಿ- 11827, ಪ್ರಭುದೇವ ದಾವಣಗೆರೆ ಎಎಚ್ ಸಿ- 247 , ಮಂಜುನಾಥ ಅಸುಂಡಿ ಸಿಪಿಸಿ- 2299 ಅವರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button