Latest

ಕಚ್ಚಾ ಬಾದಾಮ್ ಗಾಯಕ ಭುವನ್ ಕಾರು ಅಪಘಾತ

ಸೂರಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು

ಪ್ರಗತಿವಾಹಿನಿ ಸುದ್ದಿ, ಕೊಲ್ಕತ್ತಾ – ಕಚ್ಚಾ ಬಾದಾಮ್ ಹಾಡಿನ ಮೂಲಕ ಪ್ರಸಿದ್ದಿ ಬಡೆದ ಭುವನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.  ನಿನ್ನೆ ರಾತ್ರಿ ಭುವನ್​ ಕಾರು ಓಡಿಸುವಾಗ ಅಪಘಾತವಾಗಿದೆ ಎಂದ ಮಾಹಿತಿ ತಿಳಿದುಬಂದಿದೆ.
ಭುವನ್​ ಸೆಕೆಂಡ್ ಹ್ಯಾಂಡ್ ಕಾರ್​ವೊಂದನ್ನು ಖರೀದಿಸಿದ್ದರು. ಇದೇ ಕಾರನ್ನು ಓಡಿಸಲು ಕಲಿಯಲು ಹೋದಾಗ ಅಘಘಾತವಾಗಿ ಎದೆಗೆ, ಮತ್ತು ಕಾಲಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಸೂರಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆದರುವಂತಹದ್ದು ಏನೂ ಇಲ್ಲ ಎಂದು ವೈದ್ಯರು ಹೇಳಿದ್ದಾರೆ 
ಭುವನ್‌ ಅವರು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್‌ಗೆ ಒಳಪಟ್ಟ ಕುರಲ್ಜುರಿ ಗ್ರಾಮದ ನಿವಾಸಿ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬಳು ಮಗಳು ಇದ್ದಾಳೆ. ಕಚ್ಚಾ ಬಾದಾಮ್ ಹಾಡು ಫೇಮಸ್ ಆಗುತ್ತಿದ್ದಂತೆ ಇವರ ಕಡಲೆಕಾಯಿ ವ್ಯಾಪಾರ ಜೋರಾಗಿ ನಡೆಯುತ್ತಿದೆಯಂತೆ.

Related Articles

Back to top button