Latest

ಜೈಲು ಪಾಲಾಗಿದ್ದ ಕಾಳಿಚರಣ್ ಮಹಾರಾಜ್ ಗೆ ಬಿಡುಗಡೆ ಭಾಗ್ಯ

ಪ್ರಗತಿವಾಹಿನಿ ಸುದ್ದಿ; ರಾಯ್ಪುರ: ನಾಥೂರಾಮ್ ಗೋಡ್ಸೆಯನ್ನು ಹೊಗಳಿ ಜೈಲು ಸೇರಿದ್ದ ಕಾಳಿಚರಣ್ ಮಹಾರಾಜ್ ಅವರಿಗೆ ಬಿಲಾಸ್ಪುರ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ರಾಯ್ಪುರ ಧರ್ಮ ಸಂಸದ್ ನಲ್ಲಿ ಭಾಷಣ ಮಾಡಿದ ಕಾಳಿಚರಣ್ ಮಹಾರಾಜ್, ಮಹಾತ್ಮಾ ಗಾಂಧೀಜಿಯನ್ನು ಅವಹೇಳನ ಮಾಡಿದ್ದರಲ್ಲದೇ, ನಾಥೂರಾಮ್ ಗೋಡ್ಸೆಯನ್ನು ಶ್ಲಾಘಿಸಿದ್ದರು. ಈ ಪ್ರಕರಣ ಸಂಬಂಧ ರಾಯ್ಪುರ ಪೊಲೀಸರು ಬಂಧಿಸಿದ್ದರು. ದ್ವೇಷದ ಭಾಷಣ ಹಿನ್ನೆಲೆಯಲ್ಲಿ ನ್ಯಾಯಾಲಯ ಕಾಳಿಚರಣ್ ಗೆ ಜಾಮೀನು ನೀಡಲು ನಿರಾಕರಿಸಿತ್ತು. ಕಳೆದ ಮೂರು ತಿಂಗಳಿಂದ ಜೈಲುವಾಸ ಅನುಭವಿಸಿದ್ದರು.

ಅಲ್ಪಸಂಖ್ಯಾತರು ರಾಜಕೀಯದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಇಂಥದ್ದೊಂದು ಸನ್ನಿವೇಶ ಸೃಷ್ಟಿಸಿ, ದುರಂತಕ್ಕೆ ಕಾರಣವಾಗಿದ್ದು ಮಹಾತ್ಮ ಎಂದು ಕರೆಯುವ ಮೋಹನದಾಸ್​ ಕರಮಚಂದ್ ಗಾಂಧಿ. ಅವರನ್ನು ಕೊಂದ ನಾಥೂರಾಂ ಗೋಡ್ಸೆಗೆ ನಮನಗಳು ಎಂದು ಕಾಳಿಚರಣ್ ಹೇಳಿದ್ದರು.
ಅವರವರ ಹಬ್ಬ, ಧರ್ಮಾಚರಣೆಗೆ ಸ್ವಾತಂತ್ರ್ಯವಿದೆ ಎಂದ ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button