Kannada NewsLatest

ಶ್ರಮಿಕ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಅಗತ್ಯ: ಡಾ. ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಂದು ಮಹಿಳೆಯರೂ ಸಹ ನಾನಾ ಬಗೆಯ ಶ್ರಮದ ಕೆಲಸಗಳನ್ನು ನಿರ್ವಹಿಸುತ್ತ ಸಮಾಜಕ್ಕೆ ಮಾದರಿಯಾಗಿದ್ದಾರೆ. ಶ್ರಮಿಕ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯವಾಗಬೇಕು ಎಂದು ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ ಹಾಗೂ ನಿಯತಿ ಫೌಂಡೇಶನ್ ಮುಖ್ಯಸ್ಥೆ ಡಾ. ಸೋನಾಲಿ ಸರ್ನೋಬತ್ ಹೇಳಿದರು.

ಖಾನಾಪುರದ ನಂದಗಡ ಸೊಸೈಟಿಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದುಡಿಯುವ ಮಹಿಳೆಯರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಹೇಳಿದರು.

ಕಾರ್ಮಿಕರ ಬೆವರು ಒಣಗುವ ಮುನ್ನ ಅವರ ಕೂಲಿಯನ್ನು ಕೊಡಿ ಎನ್ನುವ ಮೂಲಕ ಕಾರ್ಮಿಕರ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ ಎಂದ ಅವರು, ನಿಯತಿ ಫೌಂಡೇಶನ್ ಸದಾ ಕಾರ್ಮಿಕರ ಏಳ್ಗೆಗೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.

ಯಲ್ಲಪ್ಪ ಕೋಲ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್ ಇಲಾಖೆಯ ಎಚ್‌ಐ ಜಮಾದಾರ್, ವಿದ್ಯಾ ಲೋಕೋಳಿ, ಕಾಂಬಳೆ, ಹೆರೇಕರ್ ಮೊದಲಾದವರು ಉಪಸ್ಥಿತರಿದ್ದರು.
ಜನಾರ್ಧನ ರೆಡ್ಡಿ ಪತ್ನಿಯ ಫೋಟೋ ಶೂಟ್; ರವಿವರ್ಮನ ಕುಂಚದ ಕಲೆಯ ಸುಂದರಿಯಂತೆ ಫೋಸ್ ನೀಡಿದ ಲಕ್ಷ್ಮಿ ಅರುಣಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button